ಕನ್ನಡ ಪ್ರಭದಿಂದ
Thursday, April 21, 2016
Tuesday, April 27, 2010
ಕೈವಲ್ಯ
ಚೇತನ ಮಾತ್ರವನ್ನೇ ಅನುಭವಿಸುವ ಒಂದು ಕೇವಲ ಸ್ಥಿತಿಯೇ ಕೈವಲ್ಯ. ಚೇತನ ಬಿಟ್ಟು ಯಾವ ವಿಚಾರವೂ ಇಲ್ಲದ ಅನುಭವವೇ ಕೈವಲ್ಯ. ಇದು ಚೈತನ್ಯ ಮಾತ್ರದ ಕಥಾನುಭವ. ಎಚ್ಚರ ಮಾತ್ರದ ಕಥಾನುಭವ. ಇದೊಂದು ಸಾಕ್ಷೀ ಸ್ಥಿತಿ ಅಥವಾ ಭಾವ. ಇಲ್ಲೊಂದು ಏಕೀಭಾವ ಅಥವಾ ಏಕಾಂಗಿ ಸ್ಥಿತಿ ಇರುವುದು. ಎಲ್ಲವನ್ನು ಕಾಣುವಂತೆ ಇದ್ದರೂ ಕಂಡದ್ದೆಲ್ಲಾ ಕನಸಷ್ಟೇ. ಕನಸಿನಂತಷ್ಟೇ. ಇಲ್ಲಿ ನಾನೆ ಇರುವುದು. ಮತ್ತೆ ಇನ್ನೇನೂ ಇಲ್ಲ. ಅಗಾಧ ಚೈತನ್ಯ ಸಾಗರದಲ್ಲಿ ಅರಗಿ ಲೀನವಾಗಿರುವ ಸ್ಥಿತಿ ಏನೇನೂ ಇಲ್ಲ. ಎಚ್ಚರದ ಸ್ಥಿತಿ.
ಜಗತ್ತಿನ ಎಲ್ಲ ವ್ಯಾಪಾರಗಳೂ ಇರುವುದು ಆಟಮಾತ್ರ. ಸಾಕ್ಷೀ ಒಂದು ಚೇತನ ಮಾತ್ರವೇ ಕೇವಲ ಸತ್ಯ. ದೃಷ್ಟ ಮಾತ್ರನೇ ಸತ್ಯ. ಇದೊಂದು ಜಾಗೃತ ಸ್ಥಿತಿ. ರಾತ್ರಿ ಗಾಢ ನಿದ್ರೆ. ಅನಂತದ ಜತೆ ಲೀನವಾಗುವ ಸ್ಥಿತಿ. ಚೇತನಗಳೆಲ್ಲಾ ಜಾಗೃತವಾದ ಸ್ಥಿತಿ. ಯಾರೋ ಕಳ್ಳ ಕಿಟಕಿ ಮುರಿಯುವ ಸಿದ್ಧತೆಯಲ್ಲಿ ಇದ್ದಾನೆ. ಈ ಜಾಗೃತ ಸ್ಥಿತಿ ಇದನ್ನು ನೋಡುತ್ತದೆ. ನಿದ್ರೆಯಿಂದ ಎಚ್ಚರವಾಗುತ್ತದೆ. ಎದ್ದು ದೀಪ ಬೆಳಗಿಸುತ್ತಲೇ ಕಳ್ಳ ಓಟಕಿತ್ತಿರುತ್ತಾನೆ. ಹೊರಗೆ ನಿದ್ರೆಯಿಂದ ಎಚ್ಚರವಾದಾಗಲೂ ನಮಗೆ ಈ ಸುದ್ದಿ ಮಾತ್ರ ಇಲ್ಲ. ಆದರೆ ನಮ್ಮ ಈ ಚೈತನ್ಯದ ಸ್ಥಿತಿ ಇದನ್ನು ಕೇವಲವಾಗಿ ಕಂಡಿದೆ. ತತ್ಸಂಬಂಧಿ ಕ್ರಿಯೆಗಳಲ್ಲಿ ತೊಡಗಿಸಿಕೊಂಡಿದೆ. ಈ ಆಂತರಿಕ ಎಚ್ಚರದ ಸ್ಥಿತಿಯನ್ನೇ ಸಾಕ್ಷೀಭಾವ ಎನ್ನುವುದು. ರಾತ್ರಿ ಮೂರು ಗಂಟೆಗೆ ಎದ್ದು ನಾಲ್ಕು ಗಂಟೆಯ ರೈಲನ್ನು ಹಿಡಿಯಲಿಕ್ಕಿದೆ. ಗಡಿಯಾರದ ಮುಳ್ಳು ಮೂರರಲ್ಲಿ ನಿಂತದ್ದೇ ಸರಿ, ತಕ್ಷಣ ಗಾಢ ನಿದ್ರೆಯಿಂದ ಎಚ್ಚರವಾಗುವುದು. ಇದು ನಮ್ಮೊಳಗಿರುವ ಸಾಕ್ಷೀಭಾವದ ಸೂಚನೆ. ಈ ಸಂಜ್ಞೆಯೇ ಎಚ್ಚರ. ಕೆಲವರಲ್ಲಿ ಇದು ಮಸುಕು ಮಸುಕಾಗಿರಬಹುದು. ಅಥವಾ ಅನುಭವಕ್ಕೆ ಬಾರದಿರಬಹುದು. ಇನ್ನು ಕೆಲವರಿಗೆ ಈ ಅನುಭವ ಅತ್ಯಂತ ತೀವ್ರತರವಾಗಿರಬಹುದು. ಸದಾ ಜಾಗೃತವಾಗಿರಬಹುದು. ಇದೇ ನಿಜವಾದ ಜಾಗೃತ ಅವಸ್ಥೆ. ಇದನ್ನೇ ಎಚ್ಚರ, ಜಾಗೃತಿ ಎನ್ನುವರು. ಇಂತಹ ಎಚ್ಚರದಲ್ಲಿಯೇ ಕಾಯುವಂತಿರಬೇಕು. ಈ ರೀತಿ ಎಚ್ಚರದಲ್ಲಿ ಜೀವಿಸುವವರು ಒಂದು ದಿನ ಎಚ್ಚರದಲ್ಲಿಯೇ ಸಾಯುವವರು ಕೂಡ. ಇಂತಹ ಎಚ್ಚರದಿಂದ ಸಾಯುವವರಿಗೆ ಬ್ರಹ್ಮರೂಪನದನೆಂಬ ಅನುಭವವಾಗುವುದು. ಇದು ಸಾಕ್ಷೀಭಾವ. ಶರೀರದಲ್ಲಿರುವ ಸುಪ್ತವಾಗಿರುವ ಚೇತನದೊಂದಿಗೆ ಇದರ ಅನುಭವವನ್ನು ಹೊಂದಬಹುದಾಗಿದೆ. ತದನಂತರ ಶರೀರಯಾಮದಿಂದ ಹೊರತಾಗಿಯೂ ಅನುಭವವನ್ನು ಪಡೆಯಬಹುದಾಗಿದೆ. ಇಂತಾದ ಎಚ್ಚರದ ಸ್ಥಿತಿಯಲ್ಲಿ ಶರೀರದ ಘಟ ಒಡೆದುಕೊಳ್ಳುವ ಘಟನೆಯಲ್ಲೂ ಸಾಕ್ಷೀಭಾವವು ಘಟ ಒಡೆಯುವ ಮೃತ್ಯುವೆಂಬ ಪ್ರಕ್ರಿಯೆಯನ್ನೂ ಅನುಭವಿಸಬಹುದು. ಈ ಎಚ್ಚರವೇ ಅಂತರಾಕಾಶದಲ್ಲಿ ವಿರಾಟಾಕಾಶದಲ್ಲಿ ಲೀನವಾಗುತ್ತದೆ. ಎಚ್ಚರದ ಕೇವಲ ಚೇತನವಾಗಿಯೋ ಆತ್ಮವಾಗಿಯೋ ಉಳಿಯುತ್ತದೆ. ಇಲ್ಲಿಂದ ಮತ್ತೊಂದು ಅದ್ಭುತ ಅಂತರ್ಯಾತ್ರೆ ಮುಂದುವರಿಯುವುದು. ಇಂತಹವರಿಗೆಂತು ಮೃತ್ಯು ಶತ್ರುವಾಗಲು ಸಾಧ್ಯ?
ಈ ಎಚ್ಚರವಂತ ಚೇತನರಿಗೆ ಮೃತ್ಯುವು ಮಿತ್ರನೇ. ಆತ್ಮ ಪರಮಾತ್ಮರ ಮಿಲನವು ಜೀವಂತ. ಜೀವನ ನಡೆಸುತ್ತಿರುವಾಗಲೂ ಎಚ್ಚರದ ಸ್ಥಿತಿಯಲ್ಲಿ ಸುಪ್ತವಾಗಿ ಗುಪ್ತವಾಗಿ ನಡೆಯುತ್ತಿರುತ್ತದೆ. ಇಂತಹ ಮಿಲನದ ಮಂದಿರದೊಳಗೆ ಮಹಾದ್ವಾರದಂತಿದೆ. ಧ್ಯಾನ ಪ್ರಕ್ರಿಯೆ ಇಂತಹ ಗಾಢತಮವಾದಂತೆ ಸಾಕ್ಷೀಭಾವವು ತೀವ್ರತರವಾಗುತ್ತಿರುತ್ತದೆ.
ಈ ಲೇಖನವನ್ನು http://shreeacharya.blogspot.com/2009/05/blog-post.html ಬ್ಲಾಗಿನಿಂದ ತರಲಾಗಿದೆ, ಕಾರಣ ಈ ಮೇಲೆ ತಿಳಿಸಲಾದ ಬ್ಲಾಗಿನಲ್ಲಿ ಫಾಂಟ್ ಓದಲು ಬಾರದಂತೆ ಇದ್ದುದರಿಂದ ನನ್ನ ಬ್ಲಾಗಿನಲ್ಲಿ ಕಾಪಿ ಪೇಸ್ಟ್ ಮಾಡಿದ್ದೇನೆ ಶ್ರೀ ಅಚಾರ್ಯ ಅವರು ಇದು ತಪ್ಪೆನಿಸಿದಲ್ಲಿ ದಯವಿಟ್ಟು ತಿಳಿಸಿ ಅಳಿಸಿಹಾಕುತ್ತೇನೆ.
ದೇವರು-೪
ಪರಮಾತ್ಮನ ಹೊರಗೆ ಇರಲು ಕೊದಿ
ಸ್ವಲ್ಪ ಸಮಯ ಸ್ವಲ್ಪ ಸ್ಥಾನ ಸೌಲಭ್ಯ
ಸಾಗರದ ಮೀನು
ಎಂದು ಕಳಕೊಂಡೀತು ಸಾಗರವನ್ನು
ಕಳೆದುಕೊಂಡುದನು ಕನಸಿನಲು
ಹಾಗೆಯೇ ನಾವು ಕಾಣುವೆವು ಪರಮಾತ್ಮನನು ಎಚ್ಚರದಲ್ಲವೇಕೋ
ಯಾವ ಅಲೆಗಳೂ ನಮ್ಮನ್ನೆಸೆಯಲಾರವು ಪರಮಾತ್ಮಸಾಗರದಲಿ
ಬೆಸ್ತನೂ ಇಲ್ಲ ತಟವೂ ಇಲ್ಲ
ಈ ಮೂರ್ಛೆ ಈ ಭ್ರಮೆ ಕಳೆದರೆ
ಉಳಿಯುವುದೇನು ಪರಮಾತ್ಮ
ಬೇರೆಬೇರೆಯಾಗಿ ಪರಮಾತ್ಮನನ್ನು ಕಾಣುವ ಕಣ್ಣುಗಳಿಗೆ
ಪರಮಾತ್ಮ ನಿಜಕ್ಕೂ ಕಂಡಿರುವನೇನು?
ಅಜ್ಞಾತ ಪರಮಾತ್ಮನ ತಿಳಿಯಲು
ಆ ವಿಚಾರವೇ ಮಾರ್ಗ
ನಿಸ್ತರಂಗ ದರ್ಪಣದ
ಮೇಲಿನ ಪ್ರತಿಬಿಂಬ ಪರಮಾತ್ಮ
ದನ್ಯತಾಭಾವದ ಮೋಡಗಳಿಲ್ಲವಾದರೆ
ಮಳೆಯಾದರೂ ಎಂದು ಸುರಿದೀತು
ನಿಮ್ಮ ಭಾಷೆಯಿಂದ
ಅಸ್ತಿತ್ವಕ್ಕೇನು ಆಗಬೇಕಾದ್ದಿದೆ
ಹುಲ್ಲುಕಡ್ಡಿಯೊಂದು ಅದಾವುದೋ ತಾರೆಯೊಂದಿಗೆ
ಸಲ್ಲಾಪಿಸುವುದನ್ನು ಕಂಡೆ
ಅಘಾತದಂತೆ ಸುರಿಯುತ್ತಿದೆ
ಪರಮಾತ್ಮನ ಅನುಕಂಪ
ಸಾಗರವನ್ನೂ ನೋಡಲಾಗದಂತೆ
ನಾವೂ ಕುರುಡರಂತೆ
ಯಾವಾಗಲೂ ಚಿಂತೆ
ನಮಗೆ ಅವನದೇ
ಅವನಿಗೋ ನಮ್ಮದೇ
ಅದೇ ಧರ್ಮ
ದ್ರುವಗಳಲ್ಲಿ ಹೆಪ್ಪುಗಟ್ಟಿ
ಸಾಗರದಲ್ಲಿ ನೀರು ನೀರಾಗಿ
ಮೋಡದಲ್ಲಿ ಹನಿಹನಿಯಾಗಿ
ಅಲ್ಲಿರುವವನಾರಲ್ಲಿ
ಈ ಅಸ್ತಿತ್ವದಿಂದಲೇ ಉಂಡು
ಈ ಅಸ್ತಿತ್ವವನ್ನೇ ಒಂದು ದಿನ ಸೇರುವ
ನಮಗೇಕೆ ಇದರ ಮೇಲಿಲ್ಲ ಪ್ರೇಮ
ಪ್ರೇಮದಿಂದ ಮಾಡಿದ್ದು ಧಾರ್ಮಿಕತೆಯಿಂದಾದರೆ
ಭಯದಿಂದ ಮಾಡಿದ್ದೆಲ್ಲವೂ ಅಧಾರ್ಮಿಕತೆ ಅಲ್ಲವೇನು
ಬೊಬ್ಬೆ ಹಾಕಬೇಡಿ
ದಮ್ಮಯ್ಯ ಕಿವುಡನಲ್ಲ ಆತ
ಕೇಳಿ ಕೇಳಿ ಆತನೇ
ಕಳೆಯುತ್ತಿದ್ದಾನೆ ಸಾರಿ ಸಾರಿ
ಕೊಡು ಕೊಡು ಎಂದು ಸಾವಿರ ಸಾರಿ
ಬೇಡಿದರೂ ಕೊಡಲೊಲ್ಲದ ದೇವ
ತೆಗೋ ಎಂದಂತಾದಾಗ
ಬಡತನ ನೀಗೀತು
ಸಿರಿತನ ಬೆಳಗಿತ್ತು ಪಡೆದು ಪಡೆದು
ಸಾಗರದಲ್ಲಿ ಮೀನು
ನೀರನ್ನು ಎಷ್ಟಾದರೂ ಹುಡುಕೀತೋ
Posted by shree_acharya at 14:13 0 comments
ದೇವರು-೩
ಪರಮಾತ್ಮನಿಗೆ ಇನ್ನೆಲ್ಲಿದೆ ದೂರ
ಅದೇ ಯೋಗ
ಪರಮಾತ್ಮನೆಲ್ಲೋ ಅನತಿದೂರದಲ್ಲಿ
ಅದೇ ರೋಗ
ಪರಮಾತ್ಮನೆಲ್ಲೋ ಪ್ರಪಂಚವಿಲ್ಲ
ಅದೇ ಭೋಗ
ಸಕಾರಣವೆಲ್ಲವೂ ಸಂಸಾರದ ಅಂಗ
ಅಕಾರಣವೆಲ್ಲವೂ ಪರಮಾತ್ಮ ಸಂಗ
ಎಲ್ಲರೂ ಕೇಳುತ್ತಾರೆ ಜಾತಿ ಏಕಿವರಿಗೆ ನನ್ನ ಜಾತಿ
ತಿಳಿದಿರುವುದೇನು ಇವರಿಗೆ ಪರಮಾತ್ಮನ ಜಾತಿ
ಅವನದೇ ನನ್ನದೂ
ತಿಳಿದೂ ತಿಳಿದೂ ತಿಳಿಯದಾದಂತಾಯಿತೋ
ಪರಿಚಯವಾಗಿಯೂ ಅಪರಿಚಿತದಂತಾಯಿತೋ
ಅರಿತೂ ಅರಿತೂ ಅರಿಯದಂತಾಗಿ ಉಳಿಯಿತೋ
ಅಪ್ಪಿ ಬಿಗಿದಪ್ಪಿಕೊಂಡರೂ ತಪ್ಪಿಸಿಕೊಂಡೇಹೋಯಿತೋ
ಅಟ್ಟಿಬೆನ್ನತ್ತಿಹೋದರೋ ರಹಸ್ಯವನ್ನೇ ಬಿಟ್ಟು ಹೋಯಿತೋ
ಅಜ್ಞಾತವೇನೋ ಪರಮಾತ್ಮನೇನೋ
ಅನೇಕತೆ ಕಂಡಲ್ಲೆಲ್ಲ ಸಂಸಾರ
ಏಕತೆ ಕಂಡಲ್ಲೆಲ್ಲ ಭಗವಂತ
ದಿನವೂ ಅವನದೇ ರಾತ್ರಿಯೂ ಪ್ರಕಾಶವೂ ಅವನದೇ
ಅಂಧಕಾರವೂ ಅವನ ಅಂಧಕಾರದಲ್ಲೂ ಶಾಂತಿ
ಅವನ ರಾತ್ರಿಯಲ್ಲೂ ಸೌಂದರ್ಯ ರಾತ್ರಿಯ ಅಂಧಕಾರದ ಭಯ
ಅವನಲ್ಲಿ ಪೂರ್ವಾಗ್ರಹ ಬೇಡ ಅವನೋ ಪ್ರೇಮಗಂಗೆಯೇನೋ
ಅದಾರು ಹಿಡಿದರು ಅದಾರು ತುಂಬಿಕೊಂಡರು
ಅದೋ ಒಂದು ವಿರಾಟ
ಸಿಗುವುದೇನೋ ರಜಾ ಎಂದಾದರೂ ಎಂತಾದರೂ
ಸಂತತ್ವಕ್ಕೆ ಸಾಧುತ್ವಕ್ಕೆ
ಎಂದು ಬಿಡುಗಡೆ ಯಾರಿಗಾದರೂ ಪ್ರೇಮದಿಂದ
ಇಲ್ಲೇ ಇಗಲೇ ಇಂದೇ ನಮಗೆ ಪರಮಾತ್ಮನನ್ನು ನೋಡಬೇಕೆಂಬಾಸೆಯೇನು
ನಾಳೆ ನೋಡಿದರಾಗುವುದಿಲ್ಲವೇನು
ಮರಳು ಯಾರದು ಸಾಗರ ಯಾರದು
ನಾವೆಲ್ಲಿದ್ದರೇನಂತೆ ಅಲ್ಲೇ ಇದೆ
ಏನೋ ಸುಗಂಧ ಆಹ್ಲಾದ
ಶ್ರದ್ಧಾಸುಮ ಅರಳುವಲ್ಲಿ
ಅದೋ ನೋಡಿ ಪೂರ್ವದಲ್ಲಿ ಬೆಳಗಿನ ಜಾವದ ಕೊನೆಯ ನಕ್ಷತ್ರ
ಅದೇ ಜಗತ್ತು
ಸಂಸಾರವನ್ನು ನೋಡುವ ಕಣ್ಣಲ್ಲಿ ಪರಮಾತ್ಮನನ್ನು ಎಂತು ನೋಡಲಿ
ಪರಮಾತ್ಮನಿಂದ ಹೊರಗೆ ಇರಲು ಕೊಡಿ ಸ್ವಲ್ಪ ಸಮಯ
ಸ್ವಲ್ಪ ಸ್ಥಾನ ಸ್ವಲ್ಪ ಸೌಲಭ್ಯ
ಸಾಗರದ ಮೀನು ಎಂತು ಕಳೆದುಕೊಂಡೀತು ಸಾಗರವನ್ನು
ಕಳೆದುಕೊಂಡುದನು ಕನಸಿನಲು
ಹಾಗೆಯೇ ನಾವು ಕಾಣುವೆವು ಪರಮಾತ್ಮನನು ಎಚ್ಚರದಲ್ಲಲ್ಲವೇಕೆ
ಯಾವ ಅಲೆಗಳೂ ನಮ್ಮನ್ನೆಸೆಯಲಾರವು ಪರಮಾತ್ಮ ಸಾಗರದಲ್ಲಿ
ಬೆಸ್ತನೂ ಇಲ್ಲ ತಟವೂ ಇಲ್ಲ
ಈ ಮೂರ್ಛೆ ಈ ಭ್ರಮೆ ಕಳೆದರೆ ಉಳಿಯುವುದೇನು
ಪರಮಾತ್ಮ
ಬೇರೆಬೇರೆಯಾಗಿ ಪರಮಾತ್ಮನನ್ನು ಕಾಣುವ ಕಣ್ಣುಗಳಿಗೆ
ಪರಮಾತ್ಮ ನಿಜಕ್ಕೂ ಕಂಡಿರುವನೇನು
ಅಜ್ಞಾತ ಪರಮಾತ್ಮನ ತಿಳಿಯಲು
ಆ -ವಿಚಾರವೇ ಮಾರ್ಗ
ನಿಸ್ತರಂಗ ದರ್ಪಣದ ಮೇಲಿನ ಪ್ರತಿಬಿಂಬ
ಪರಮಾತ್ಮ
ಧನ್ಯತಾಭಾವದ ಮೋಡಗಳಿಲ್ಲವಾದರೆ
ಮಳೆಯಾದರೂ ಎಂದು ಸುರಿದೀತು
ಅಸ್ತಿತ್ವಕ್ಕೇನು ನಿಮ್ಮ ಭಾಷೆಯಿಂದ ಆಗ ಬೇಕಾದ್ದಿದೆ
Posted by shree_acharya at 14:06 0 comments
ದೇವರು-೨
ಬರಿಯ ವರ್ತನೆ ಭಾವನೆ ನಡತೆಗಳೇ ಮನುಷ್ಯ..
ಹೊಸ ಚಿಗುರು ಹೊಸ ಮೊಗ್ಗು ಹೊಸ ಹೂ ಅಸ್ತಿತ್ವದ ಕೊಡುಗೆ.
ಪ್ರೇಮಕ್ಕೆ ಕಾರಣ ಬೇಡ
ಪ್ರೇಮಕ್ಕೆ ಇತಿಯೂ ಇಲ್ಲ ಮಿತಿಯೂ ಇಲ್ಲ..
ಎಲ್ಲ ಪದ ಪ್ರಶ್ನೆಗಳು ಕರಗಿ ಆವಿಯಾದ ನಂತರ ಉಳಿಯುವ ರಹಸ್ಯ ವಿಸ್ಮಯ ಪರಮಾತ್ಮ.
ಒಂದೊಂದು ಅಣುವಿನಲ್ಲೂ ಎಲೆ ಎಲೆಯಲ್ಲೂ ಅಲೆಅಲೆಯಲ್ಲೂ ಮೊದದಲ್ಲೂ ನಂತರದಲ್ಲೂ ಪ್ರಶ್ನಾರ್ಥಕ ಚಿಹ್ನೆ.
ಇಲ್ಲೇ ಈಗಲೇ ಸತ್ತು ಬಿದ್ದಿರುವ ದೇವರನ್ನು ಇನ್ನೆಲ್ಲಿ ಹುಡುಕಲಿ..
ಅಲೆ ಅಲೆಗಳಲಿ ಆಲಿಸಬೇಕು ಅಸ್ತಿತ್ವದ ಅಸಲು.
ಬೆಳೆಸಿಕೊ ಗುಲಾಬಿಯನ್ನು ನಿನ್ನೊಳಗೆ ಯಾಕೆ ಕೀಳುತ್ತಿರುವೆ ಹೊರಗೆ ಇರುವುದನ್ನು..
ಭಗವಂತ ಸೃಷ್ಟಿಸಿದುದರಲ್ಲಿ ಇಲ್ಲಿ ಎಲ್ಲಿ ಬಿರುಕುಯೋನಿ ಇಲ್ಲ..
ಕಾರಣದಲ್ಲಿ ಕಾವ್ಯ ಅರಳುವುದು
ಹೂವಿನಂತೆ
ಪ್ರತಿ ಮಾನವನು
ತನ್ನದೇ ಪರಿಪೂರ್ಣ ಜೀವನದ ಪ್ರತೀಕ
ಎಲ್ಲದರಲ್ಲೂ
ಅದರದ್ದೇ ಅದೊಂದು ನಿಗೂಡತೆ ಗರ್ಭಿತ
ನಿಸರ್ಗದ ಕಣಕಣದಲ್ಲೂ
ನಿಸರ್ಗದ್ದೇ ಶಕ್ತಿ ತಾಣಗಳು ಮಾನಗಳು
ಒಂದು ಹನಿ ಇಬ್ಬನಿಯಲ್ಲಿ ಇಡಿಯ ವಿಶ್ವ
ಗೋಳದಲ್ಲಿ ತಿರುಗುವುದು
ನಮ್ಮ ಒಳಗಿನ ಆತ್ಮ ಒಂದು ಬಾವನೆಯಾದರೆ
ಹೊರಗೆ ಅದೊಂದು ನ್ಯಾಯ
ಪಾಚಿಯಲ್ಲೂ ಬಲೆಯಲ್ಲೂ ಸರ್ವಾಂತರ್ಯಾಮಿತ್ವದ ವಿಸ್ತೃತ ಜಾಲವಿದೆ
ಕಾಣುವ ಕಣ್ಣು ಇದೆ
ಎಲ್ಲ ಬಿಂದುಗಳಲ್ಲೂ ವಿಶ್ವದ ಮೌಲ್ಯವು
ಹುದುಗಿದ್ದೇ
ಒಳ್ಳೆಯದಿದೆಯೋ
ಕೆಟ್ಟದ್ದೂ ಇದ್ದೇ ಇದೆ
ಆತ್ಮೀಯತೆಯಲ್ಲಿ ದೂರವಿದೆ ವಿಸ್ತಾರವಿದೆ
ಪ್ರೇಮದಲ್ಲಿ ತಲ್ಲೀನತೆ ಇದೆ
ಸನಾತನ ಪ್ರಕಾಶ ನನಗೂ ಅಲ್ಲ ನಿನಗೂ ಅಲ್ಲ
ಎಲ್ಲರಿಗೂ ಸೇರಿದ್ದು
ಪಾರಮಾರ್ಥಿಕದಲ್ಲಿ ತೃಪ್ತರಾಗಿ ಬಿಡುವುದು
ಆತ್ಮಘಾತಕ
ಮೊಳಕೆ ಅಂಧಕಾರದಲ್ಲಿಯೇ
ಬೆಳಕನ್ನು ಸಹಿಸದು
ಬಿಜವೇಕೆ ಗೂಢವಾಗಿ ಭೂಮಿಯೊಳಗೆ
ಮೊಳೆಯುವುದು ಬೆಳೆಯುವುದು
ಪರಮಾತ್ಮನೆಲ್ಲಿ ನಡೆಯುತ್ತಾನೆ
ಅವನೋ ನರ್ತಿಸುತ್ತಾನೆ ಹಾಡುಗಬ್ಬವಾಡುತ್ತಾನೆ
ರಹಸ್ಯದರ್ಶಿ ಖಾಲಿ ಬಿದಿರಿನ ಕೊಳಲು
ತಾಯಿ ಯಾರು ತಾಯಿತನವೇನು
ಇದನ್ನಾರು ಹೇಳಬೇಕು ಇದರಲ್ಲರು ಇರಬೇಕು
ದೇವಾಲಯದಲ್ಲಿರುವ ವಿಗ್ರಹವೊಂದು ದರ್ಪಣವೆಂದು
ನಮ್ಮಂತೆ ನಿಮ್ಮಂತೆ
ಎಲ್ಲೆಂದರಲ್ಲಿ ಹಾರಲಾಗದ ವಿಮಾನಕ್ಕಿಂತ ಒಂದು ಹಕ್ಕಿ ಚಂದ
ಇದರ ಕೃತಿಕಾರನಿನ್ನೆಷ್ಟು ಚಂದವಾಗಿರಬಹುದೋ ಕಾಣಲೂ ಸಿಗೋಲ್ಲ
ಎಣಿಸಿಕೊಂಡರೂ ಬರೋಲ್ಲ
Posted by shree_acharya at 14:05 0 comments
Thursday, 11 June 2009
ದೇವರು
ದೇವರ ಅಸ್ತಿತ್ವವೆಂದರೆ ಉಪಸ್ಥಿತಿ ಅನುಪಸ್ಥಿತಿಯಂತೆ ಅನುಪಸ್ಥಿತಿಯೇ ಉಪಸ್ಥಿತಿಯಂತೆ.
ದೇವರು ಎಲ್ಲೂ ಕಾಣದಿರುವುದರಿಂದಲೇ ಎಲ್ಲೆಲ್ಲೂ ಇದ್ದಾನೆ. ಇರದ ಎಂದು ತಾಣವೂ ಇಲ್ಲ.
ನಿನ್ನನ್ನೇ ಎಲ್ಲೆಲ್ಲೂ ಕಾಣುವ ಭಕ್ತನಿಗೆ ನೀನೆಲ್ಲೂ ಕಾಣುವುದಿಲ್ಲ. ನಿನ್ನಂತೆ ಅವನು ರೂಪರಹಿತನಾದರೆ ಅವನೂ ಎಲ್ಲೂ ಕಾಣುವುದಿಲ್ಲ. ನಮ್ಮೊಳಗಿನ ಈ ಆಂತರಿಕ ಸಂವಾದ ಏನು?
ಹುಡುಕಿ ಹುಡುಕಿ ನಾನು ನನ್ನನ್ನೇ ಕಳೆದುಕೊಂಡು ಬಿಟ್ಟೆ. ಅವನು ಸಿಕ್ಕೇ ಬಿಟ್ಟ.
ಹುಡುಕು ಸಿಗೋಲ್ಲ. ಹುಡುಕಬೇಡ ಸಿಗುತ್ತೆ. ಯಾಕೆ ಗೊತ್ತಾ?
ಅದು ಅಲ್ಲೇ ಈಗಲೇ ಇದೆ. ಭಕ್ತನೆಲ್ಲಿದ್ದಾನೆ ಅಲ್ಲಿಲ್ಲ ದೇವರು. ಭಕ್ತನೆಲ್ಲಿ ಇಲ್ಲವೊ .. ಅಲ್ಲೇ ಇದ್ದಾನೆ ದೇವರು.
ಭಕ್ತನಿಗೆ ತಿಳಿದಿದೆ ನಾನಿದ್ದಲ್ಲಿ ದೇವನಿರುವುದಿಲ್ಲವೆಂದು ಅದಕ್ಕೆ ದೇವರನ್ನು ಇಟ್ಟಿದ್ದಾನೆ ಮೂರ್ತಿಯೊಳಗೆ.
ಪರಮಾತ್ಮನೇನೋ ದೂರದಲ್ಲಿದ್ದಾನಂತೆ, ಇಲ್ಲೇನಿದೆ? ಈಗೇನು?
ಪರಮಾತ್ಮ ಸ್ವರೂಪ ಒಬ್ಬ ಕವಿ ಹೊರಡಿಸುವ ಅಹಂಕಾರ ರಹಿತ ಕವಿತೆ.
ಅದು ಹೇಗೆ ರಾತ್ರಿಯಲ್ಲೂ ಕರುಣೆಯ ಬೆಳಕು ಬೆಳಗುತಿರುವುದೋ ನಿರಂತರ?
ಏನಿದು ಕೊತ್ತದ್ದರ ಹತ್ತು ಪಟ್ಟು ಬಿತ್ತಿಕೊಡುವ ಮೊಳೆಯುವ ಈ ಹನಿಬೀಜ?
ಎಂತೋ ಸಾಗರವಾಯಿತಲ್ಲ....!
ಚಿತ್ತದಾಳದ, ಕಮಲನಾಳದ, ಅತ್ಯಾಳದ ಭಾವ ಭಾವೈಕ್ಯತೆಯೇ ಪರಮಾತ್ಮ.
ಅಸ್ತಿತ್ವ ನನ್ನನ್ನು ಪ್ರೇಮಿಸುತ್ತದೆ ಹೂವಿನಂತೆ. ಹೂವಿನ ಮೇಲೆರಗುವ ಇಬ್ಬನಿಯಂತೆ. ಆಕಾಶವನೇ ಹೊಡೆಯುವಂತೆ. ನೀರು ಹರಿದಂತೆ, ನಿರ್ಮಲ.
ಅವಕಾಶವೆಂದರೆ ಅಸ್ತಿತ್ವ, ಅದು ಇಲ್ಲಿ ಈಗ.
ಎಲ್ಲವನ್ನು ಹೇಳಬಲ್ಲ ಆ ಒಂದು ಸಾಲು ಮರೆತೇ ಹೋಗಿದೆ, ಹೇಗೆ ಹೇಳಲಿ ಅದನು.
ಎಂತ ವಿಸ್ಮಯ, ಏನು ಅದ್ಭುತ?
ಅಬ್ಬಾ ರಹಸ್ಯವೇ, ಇದೊರಳಗೆ ವಿವೇಕ...
ರವಿ ಮೂಡುತಿದೆ.. ಹಕ್ಕಿ ಹಾಡುತಿದೆ.. ಹೂ ಅರಳುತಿವೆ..ತಾರೆಗಳು ಮಿನುಗುತಿವೆ.. ಚಂದ್ರ ಹಾಲು ಚೆಲ್ಲುವ.. ಜೀವನವೆಲ್ಲಾ ಆನಂದ ಪುಲಕಿತ..
ಅತೀತ ಪಶುತ್ವ.
ಭವಿಷ್ಯ ಪರಮಾತ್ಮ.
ನಡುವೆ ಮನುಷ್ಯತ್ವ.
ಅದ್ಭುತ ಪ್ರಕಾಶದ ಸಾಧ್ಯತೆ.. ಮನುಷ್ಯ.
Posted by shree_acharya at 09:55 0 comments
Monday, 8 June 2009
ಧರ್ಮ - ವಿವೇಕ
ಧರ್ಮ ಎಂಬುದೊಂದಿದ್ದರೆ ಮಾತ್ರ ಜೀವನದಲ್ಲಿರುವುದು ಸಾಧ್ಯ. ವ್ಯರ್ಥವಾದ ಊಹಾಪೋಹಕ್ಕೂ ಧರ್ಮಕ್ಕೂ ಅನ್ಯಥಾ ಸಂಬಂಧ ಇರಲಾರದು.
ಆತ್ಮವು ಒಂದು ಚೈತನ್ಯ; ಚೇತನ.
ವಿಚಾರಗಳಿಂದ ಸಿದ್ಧಾಂತಗಳಿಂದ ಮುಕ್ತವಾಗಿರುವ ಚೇತನವೇ ಧಾರ್ಮಿಕ ಚೇತನ.
ಧಾರ್ಮಿಕ ಚಿತ್ತ ಕಾಲ್ಪನಿಕ ಚಿತ್ತವಲ್ಲ.
ಭಯಕ್ಕೂ ಧರ್ಮಕ್ಕೂ ಸಂಬಂಧವಿಲ್ಲ; ಭಯಕ್ಕೂ ದೇವರಿಗೂ ಸಂಬಂಧ.
ಧಾರ್ಮಿಕರ ಕೈಯಲ್ಲಿ ಇಲ್ಲ ಧರ್ಮ.
ಧರ್ಮ ಎಂದರೆ ಅಭಯ. ಧರ್ಮ ಎಂದರೆ ಎಲ್ಲ ಭಯಗಳಿಂದ ವಿಮೋಚನೆ.
ಧರ್ಮವು ನಂಬಿಕೆಯಲ್ಲ.
ಧರ್ಮವು ಕುರುದುತನವಲ್ಲ. ಕಣ್ಣುಗಳ ಸೂಕ್ಷ್ಮತೆ.
ಶೋಷಣೆಯ ಪ್ರಕ್ರಿಯೆಗೆ ವಿವೇಕವಾಗಲೀ ಶ್ರದ್ಧೆಯಾಗಲೀ ತೊಂದರೆಯೇ ಸರಿ. ಧರ್ಮವು ಇದಕ್ಕೆ ಅಡ್ಡಿ, ಆತಂಕವೇ.
ಯಾವಾಗ ಧರ್ಮವು ವಿವೇಕ ಎಂಬ ಅಗ್ನಿಯಲ್ಲಿ ಮಿಳನವಾಗುತ್ತದೋ ಆಗ ಸ್ವಾತಂತ್ಯ್ರ ಮತ್ತು ಶಕ್ತಿಯ ಜನನವಾಗುತ್ತದೆ.
ಧರ್ಮವು ಆಗ ಬಳಶಾಲಿಯಾಗಿರುತ್ತದೆ. ಆಗ ವಿಚಾರದಿಂದ ಶಕ್ತಿ ಇದೆ.
ಧರ್ಮವು ಬೆಳಕು. ಪ್ರಜ್ಞೆಯ ಪ್ರಕಾಶ.
ಧರ್ಮವು ಮುಕ್ತಿ ಕೂಡಾ. ಯಾಕೆಂದರೆ ವಿವೇಕವೇ ಮುಕ್ತ.
Posted by shree_acharya at 04:02 0 comments
Friday, 5 June 2009
ಧರ್ಮ
ದುರ್ಬಲನು ಆತ್ಮ ಹಿಂಸಕನು;
ಸಬಲನು ಪರಹಿಂಸಕನು;
ಧಾರ್ಮಿಕನು ಅಹಿಂಸಕನು;
ಆತ್ಮ ಎಂಬುದೊಂದು ಸಿದ್ಧಾಂತವಲ್ಲ;
ಆತ್ಮ ಎಂಬುದೊಂದು ಅನುಭವ; ಅನುಭೂತಿ; ಒಂದು ಚೇತನ; ಚೈತನ್ಯ.
ಧರ್ಮವು ಸಂಪ್ರದಾಯಗಳಲ್ಲಿ ಇಲ್ಲ. ಸಂಪ್ರದಾಯಗಳು ಬರಿಯ ಸಂಘಟನೆಗಳು ಮಾತ್ರ.
ಧರ್ಮವು ಜೀವಂತ. ಚೈತನ್ಯದ ಚಲನಶೀಲತೆ ಧರ್ಮದಲ್ಲಿ ಇದೆ.
ಶಾಸ್ತ್ರಗಳ ಸಹಾಯ ಸಹಾರ ಇಲ್ಲದೆಯೂ ಧರ್ಮವು ಹಿಡಿದು ನಿಲ್ಲುತ್ತದೆ. ಹಿಡಿದು ಇಡುತ್ತದೆ.
ಆದುದರಿಂದಲೇ ಧರ್ಮವು ಜೀವಂತ. ಆಗ ಶಾಸ್ತ್ರವು ಮೃತ.
ಉಸಿರು ಉಸಿರಿನಲ್ಲಿ ಧರ್ಮ ಇದೆ. ಅದನ್ನು ಕಾಣುವ ದೃಷ್ಟಿ ನಮ್ಮಲ್ಲಿಲ್ಲ. ಧರ್ಮವು ರಕ್ತದ ಕಣಕಣದಲ್ಲಿ ಇದೆ. ಅದನ್ನು ಕಾಣುವ ಸಂಕಲ್ಪವು ಇಲ್ಲ. ಸಾಹಸವೂ ಇಲ್ಲ. ಧರ್ಮ ಸೂರ್ಯನಂತೆ ಸ್ಪಷ್ಟ. ಕಣ್ತೆರೆದು ನೋಡುವವರು ಯಾರು?
ಧರ್ಮವು ಜೀವನ. ಶರೀರದ ಸ್ಮಶಾನದಲ್ಲಿ ಅದನ್ನು ಕಾಣುವುದು ಎಂತು?
ನಿಷ್ಪಕ್ಷನಾಗದ ವಿನಃ ಧಾರ್ಮಿಕನಾಗುವುದು ಅಸಾಧ್ಯ. ಧರ್ಮವೆಂದರೆ ಅಪೇಕ್ಷೆ ಇಲ್ಲದಿರುವುದು, ನಿರ್ದೋಷಿಯಾಗಿರುವುದು.
Posted by shree_acharya at 06:57 0 comments
Thursday, 4 June 2009
ನಾವು - ನಮ್ಮ ಅರಿವು
ನಮಗಾವುದರ ಅರಿವು ಚೆನ್ನಾಗಿಲ್ಲವೋ ಅವುಗಳಿಂದ ನಾವು ಸದಾ ಬಂಧಿತರೇ;
ನಮಗಾವುದರ ಅರಿವು ಚೆನ್ನಾಗಿರುವುದೋ ಅವುಗಳಿಂದ ನಾವು ಸದಾ ಮುಕ್ತರೇ....
ಯಾವುದೇ ಕಾರಾಗೃಹದೊಳಗೆ ನಾವು ಬಂಧಿತರಾದರೂ ನಮಗೆ ಅಶಾಂತಿಯೇ. ವಿರಾಟದೊಂದಿಗೆ ಏಕೀಭಾವಕ್ಕೆ ಒಳಗಾದಾಗ ಅಲ್ಲಿ ಶಾಂತಿ ಬಿಟ್ಟು ಮತ್ತಿನ್ನೇನೂ ಇರಲಾರದು.
Posted by shree_acharya at 03:10 0 comments
Wednesday, 3 June 2009
ನಾನು - ಭ್ರಮೆ
ನಾನು ನನ್ನದು ವಿಸ್ತಾರವಾದಂತೆ ನನ್ನ ದುಃಖವೂ ವಿಸ್ತಾರವಾಗುವುದು.
ನಾನು ದೊಡ್ಡದಾದಷ್ಟೂ ನನ್ನ ಗಾಯವೂ ದೊಡ್ಡದು. ಅದಕ್ಕೆ ಬೀಳುವ ಚಿಕ್ಕ ಪೆಟ್ಟು ಕೂಡಾ ಬಹಳಷ್ಟು ದೊಡ್ಡದು.
ಸುಖವನ್ನು ವೃದ್ಧಿಸಿಕೊಂಡಷ್ಟೇ ನಾವೇ ದುಃಖವನ್ನು ವೃದ್ಧಿಸಿಕೊಂಡಿರುತ್ತೇವೆ.
ಎಲ್ಲಿಯಾದರೂ ನನ್ನದು ಎಂದು ಹೇಳಲು ಯಾವುದೇ ಉಪಾಯವೂ ಇಲ್ಲವಾದರೆ,
ವ್ಯರ್ಥವಾಗಿ ಸುಳ್ಳನ್ನೇ ನನ್ನದು ಎನ್ನುತ್ತಾ ಇರುತ್ತೆವೆಯಲ್ಲಾ, ಯಾಕೆ?
ನನ್ನೊಳಗಿರುವ ಉಸಿರು ನನ್ನದೇನು? ಆಗಷ್ಟೆ ಅದು ಪಕ್ಕದವರ ಉಸಿರಾಗಿತ್ತು. ಇನ್ನೊಂದು ಘಳಿಗೆಯಲ್ಲಿ ಇನ್ನಾರದೋ ಉಸಿರಾಗಬಹುದು.
ಬದುಕು ಯಾರ ದಾವೆಯನ್ನು ತಾನೆ ಸ್ವೀಕರಿಸುತ್ತದೆ? ಹರಿದು ಸಾಗಿ ಬಿಡುವುದೇ ಅದರ ಧರ್ಮ.
ಎಷ್ಟೊಂದು ಆಳವಪ್ಪ ನಮ್ಮ ಭ್ರಮೆ.
Posted by shree_acharya at 01:48 0 comments
Tuesday, 26 May 2009
ಸಾಕ್ಷಿಯಪಥದಲ್ಲಿ....
ಸಾಕ್ಷಿಯಾಗಿರುವುದು, ಸಾಕ್ಷಿಯನ್ನು ಕಂಡುಕೊಳ್ಳುವುದು ಅಧ್ಯಾತ್ಮವೇ ಹೊರತು ದೇವರನ್ನು ಅನ್ವೇಷಿಸುವುದು ಅಧ್ಯಾತ್ಮವಲ್ಲ.
ಪ್ರಾಚೀನರು ಈಶ್ವರಾನ್ವೇಷಣೆಗೆ ಹೊರಟದ್ದಿಲ್ಲ. ಸಾಕ್ಷಿಯಾಗಿರುವುದನ್ನು ಕಂಡುಕೊಳ್ಳಲು ಯತ್ನಿಸಿದ್ದಾರೆ. ಯೋಗನಾದರೂ ಅಷ್ಟೇ. ಆಗ ಮಾತ್ರವೇ ಯೋಗವಾದವು ಅಧ್ಯಾತ್ಮ ಎನಿಸೀತು. ಈಶ್ವರನನ್ನಾದರೂ ನಿರಾಕರಿಸಲಾದೀತು. ನಿರೀಶ್ವರರು ನಿರಾಕರಿಸಿದ್ದಾರೆ. ಆದರೆ ಸಾಕ್ಷಿಯನ್ನಾರಿಗೂ ನಿರಾಕರಿಸಲಾಗಲಿಲ್ಲ. ಬುದ್ಧನಿಗೂ ಆಗಿಲ್ಲ. ಮಹಾವೀರನಿಗೂ ಆಗಿಲ್ಲ. ಚಾರುವಾಕನಿಗೂ ಆಗಿಲ್ಲ. ಸಾಕ್ಷಿಯನ್ನು ಎಂತು ನಿರಾಕರಿಸುವುದು.
Posted by shree_acharya at 08:11 0 comments
Wednesday, 13 May 2009
Towards Comment by Saadhana
ಭಾರತೀಯ ಪರಂಪರೆಯಲ್ಲಿ ವಿದ್ಯೆಗಳದ್ದೇ ದೊಡ್ಡ ಕೋಶವಿದೆ. ಒಂದೊಂದು ವಿದ್ಯೆಯೂ ಗಹನವಾದ ನಿಘಂಟಿನಂತಿದೆ. ಪರಂಪರೆಯಲ್ಲಿ ಬರುವ ವಿದ್ಯೆಗಳೆಲ್ಲಾ ಅಕ್ಷರ ಜೋಡನೆಗಳಿಂದ ಮಂತ್ರವತ್ ರೂಪದಲ್ಲೇ ಇರುತ್ತವೆ. ಕವನದಲ್ಲಿ ಬಂದ ಮಧುವಿದ್ಯೆ ಅಂತವುಗಳಲ್ಲಿ ಒಂದು. ಇಲ್ಲಿ ಆತ್ಮಭಾವವನ್ನು ಜಾಗೃತಗೊಳಿಸುವ ಸಾಧನವಿದೆ. ದೃಷ್ಟಾರರು ಜೀವಿಗಗೊಳಗೆ ಹೃದಯ ಹೃದಯಗಳ ನಡುವಿನ ಸ್ನೇಹಭಾವವನ್ನು ದರ್ಶಿಸಿಕೊಂಡು ಸಾಕ್ಷೀಭಾವವನ್ನು ಸಾಧಕಗೊಲಿಸುವ ಸಿದ್ಧಿಯತ್ತ ಸಾಧಕನನ್ನು ಒಯ್ಯುವ ಯತ್ನವನ್ನು ಮಾಡುತ್ತಾರೆ. ಮಧು ಸ್ನೇಹದ ಸಂಕೇತ. ಇಲ್ಲಿ ಸ್ನೇಹ ಏಕೀಭಾವದಲ್ಲಿ ಆತ್ಮಭಾವದಲ್ಲಿ ಹೃದಯಕ್ಕೆ ಸ್ಥಾನವನ್ನು ಈಯುತ್ತದೆ. ತಲೆಗೆ ಬುದ್ಧಿಗೆ ಸ್ಥಾನ ಅಮುಖ್ಯವೆನಿಸುತ್ತದೆ. ಇದು ಭಾರತೀಯ ವಿದ್ಯೆಯ ಒಂದು ಸೊಗಸು.
Posted by shree_acharya at 08:46 0 comments
ಈ ಮಧುವಿದ್ಯೆ
ಎಲ್ಲೆಲ್ಲೂ ಎಲ್ಲರೂ ಇದ್ದಾರೆ
ಇನ್ನೆಲ್ಲೆಲ್ಲೋ
ಯಾರೊಬ್ಬರೂ ಯಾರೊಂದಿಗೂ
ಮಿಲನ ಆಗುತ್ತಿಲ್ಲ
ಯಾರು ಯಾರ ಮನೆಗೆ ಹೋದರೂ
ಅಲ್ಲಾರೂ ಇರುವುದಿಲ್ಲ
ಯಾರು ಯಾರೊಬ್ಬರ ಕೈಯನ್ನೇ ಹಿಡಿದರೂ
ಅವರಿವರಾರೂ ಅಲ್ಲಿ ಇರುವುದಿಲ್ಲ
ಯಾರೋ ಯಾರದೋ ಹೃದಯಸ್ಪರ್ಶಿಸಿದರೂ ಯಾರೂ
ಯಾರದೋ ತಲೆಯ ಮೇಲೆಯೇ ಕೈ ಇಟ್ಟಂತಾಗುವುದು
ಹೃದಯದಲ್ಲಾರನ್ನೂ ಕಾಣಲಾಗದೆ
ಎಲ್ಲರೂ ಎಲ್ಲರಿಗೂ ತಲೆಯಲ್ಲೇ ಎದುರಾಗುವರು
ಆಗ ಎಲ್ಲರೂ ಇನ್ನೇನನ್ನೋ ಇನ್ನೆಲ್ಲೆಲ್ಲೋ
ಅರಸರಸುತ್ತಾ ಹೋಗುತ್ತಲೇ ಇರುತ್ತಾರೆ
ಯಾರೊಬ್ಬರಿಗೂ ಮಿಲನದ ಸುಖವಿಲ್ಲ
ಅಯ್ಯೋ ಮಿಲನವಾಗಲು ಆಗುತ್ತಿಲ್ಲೆನೇನೋ ಕಾರಣಗಳಿಗಾಗಿ ಹುಡುಕುತ್ತಾರೆ
ನೋಡುತ್ತಾರೆ ದುಃಖದ ಮಡುವುಗಳನ್ನೇ
ಸುಖದ ಆಸೆಗಳು ಬಂಧಿಸುತ್ತಲೇ ಇರುತ್ತವೆ
ಆಸೆಗಳೆಲ್ಲಾ ಮುರಿದು ಬೀಳುತ್ತಲೇ ಇರುತ್ತವೆ
ಪರರಿಂದೇನು ಸಿಕ್ಕೀತು ದುಃಖವೊಂದನ್ನು ಬಿಟ್ಟು
ಸಿಗಲಾರದು ಸುಖವೂ
ಆಗಬೇಕಾದವರು ನೀವು ಪರರಲ್ಲ
ಪರರು ಆಗಬೇಕಾದಲ್ಲಿ ನೀವಲ್ಲ ಆಗಬೇಕಾದವರು
ನೀವಾಗಿ ನೀವಾಗಿ ನೀವಾಗಿ
ನೀವಾಗಿ ಪರರು
ಇದೇ ಈ ಮಧುವಿದ್ಯೆ ಮಣ್ಣಿನ ವಿದ್ಯೆ.....
Posted by shree_acharya at 05:51 1 comments
Sunday, 10 May 2009
ಪರಮಾತ್ಮ
ನಮ್ಮನ್ನು ನಾವು ಕರೆಯಬೇಕೇ? ಕೂಗಬೇಕೇ? ಇನ್ನೊಬ್ಬನನ್ನು ಬೇಕಾದರೆ ಕೂಗಿ ಕರೆಯಬೇಕು.
ನಾವು ಏನನ್ನು ಹುಡುಕುತ್ತಿದ್ದೆವೋ ಅದರಲ್ಲೇ ನಾವು ಇದ್ದೇವೆ. ನಮಗೆಕೋ ಗೊತ್ತಾಗುತ್ತಿಲ್ಲ.
ನಮ್ಮ ಆಂತರ್ಯದೊಳಗೆ ಮೌನ ಉಂಟಾದರೂ ಸಾಕು. ಅದು ಸಹ ಕೇಳಿಸುವಷ್ಟು ಸನಿಹದಲ್ಲಿಯೇ ಇದ್ದಾನೆ ಪರಮಾತ್ಮ.
ಯಾವುದು ಸನಿಹದಲ್ಲಿರುವುದೋ ಅದೇ ಕಳೆದು ಹೋಗುವುದು. ಮೀನಿಗೆಂತು ಸಾಗರವನ್ನು ತಿಳಿದುಕೊಳ್ಳಲಾಗುವುದು?
ಸಾಗರಕ್ಕೆ ತೀರವಿದೆ, ನದಿಗೆ ತೀರವಿದೆ, ವಸ್ತು ವಿಷಯಗಳಿಗೆ ತೀರವಿದೆ. ಪರಮಾತ್ಮನಿಗೆ ಅಂತದ್ದೇನು ಬೇರೇನಾದರೂ ಇದೆಯೇ? ಇದೆ ಅಲ್ಲವೇ ಪರಮಾತ್ಮನ ಅರ್ಥ.
ಇದೇ ಪರಮಾತ್ಮನ ವೈಜ್ಞಾನಿಕ ಪರಿಭಾಷೆಯೇನು?
ಎನಿರುವುದೋ ಅದಕ್ಕೆ ತೀರವಿಲ್ಲ. ಏನಿಲ್ಲವೋ ಅವೆಲ್ಲಕ್ಕೂ ತೀರವಿದೆ.
ಸತ್ಯದಿಂದ ದೂರವಾಗುವುದಾದರೂ ಏಕೆಂದರೆ ಸತ್ಯದಿಂದಲೇ ನಾವು ಹುಟ್ಟಿರುವುದರಿಂದ.
ಕಳೆಯಲಾಗದ, ಕಳೆದುಹೋಗದ, ಕಳೆದುಕೊಳ್ಳಲಾಗದ, ಕಳೆದುಹೋದಂತನಿಸುವ, ಕಳೆದೇಹೋದರೂ ಕಳೆದುಹೋಗದಂತಿರುವ, ಕಳೆದುಕೊಳ್ಳಲೆತ್ನಿಸಿದರೂ ಕಳೆದುಹೋಗದ, ಕಳೆದುಹೋದಂತೆ ಕಂಡರೂ ಕಳೆದೂ ಉಳಿದೇ ಬಿಡುವ, ಕಳೆಯಲಾಗದ, ಕಳೆದುಕೊಂಡಿರುವ ಬದುಕಿನ ಕಳೆಯಲ್ಲಿ ಕಳೆದು ಕಳೆದಷ್ಟೂ ಕಳೆದುಹೋಗದ ಎಲ್ಲವೂ ಕೊಳೆಯಾದರೂ ಕೊನೆಗೂ ಕಳೆಯಾಗಿ ಉಳಿಯದ, ಆದರೂ ಕಳೆದೇಕೊಂಡವರಂತೆ ಸದಾ ಹುಡುಕಾಡುವ, ಎಳೆ ಎಳೆಯಾಗಿಯೂ ಕಳೆಯದ, ಕಳೆಯಲಾಗದ ಆ ವಸ್ತು ಪರಮಾತ್ಮ.
Posted by shree_acharya at 05:48 0 comments
Wednesday, 6 May 2009
ಸಾಕ್ಷೀಭಾವ; ಕತ್ತಲು-ಪ್ರಕಾಶ
ಸಂಸಾರ-ಮೋಕ್ಷ, ಮಿಥ್ಯ-ಸತ್ಯ ಈ ಪದದ್ವಯಗಳೇನು? ಕತ್ತಲು-ಪ್ರಕಾಶ ದ್ವಂದ್ವಗಳಂತೆ ಕಾಣುತ್ತವೆ. ಪರಸ್ಪರ ವಿರೋಧ ಶಬ್ದಗಳಂತೆ ಕಾಣುತ್ತವೆ. ಒಂದು ಮತ್ತೊಂದರ ಶತ್ರುವೇನೋ ಅನಿಸುತ್ತದೆ. ಪ್ರಕಾಶ ಬಂದಾಗ ಕತ್ತಲು ಹೋಯಿತು ಎನ್ನುತ್ತೇವೆ. ಬೆಳಕು ಬಂತು ಅಂಧಕಾರ ಹೋಯಿತು ಎಂಬ ಪರಿಭಾಷೆ ಬಳಕೆಯಲ್ಲಿ ಇದೆ. ಬೆಳಕು ಬಂದದ್ದಾದರೂ ಎಲ್ಲಿಂದ? ಕತ್ತಲು ಹೋದದ್ದೇ ಆದರೂ ಎಲ್ಲಿಗೆ? ವಾಸ್ತವದಲ್ಲಿ ಬೆಳಕು ಬಂದಾಗ ಕತ್ತಲು ಬೆಳಕಿನೊಂದಿಗೆ ಲೀನವಾಯಿತು. ಬೆಳಕು ಅಂಧಕಾರವನ್ನು ತನ್ನೊಳಗೆ ಸೇರಿಸಿಕೊಂಡಿದೆಯಷ್ಟೇ. ಬೆಳಕು ಮರೆಯಾದರೆ ಅಂಧಕಾರ ಇದ್ದಲ್ಲೇ ಉಳಿದಿರುವುದು.
ಮಿಥ್ಯ-ಸತ್ಯ ಇವೆರಡರ ಬಗೆಗೂ ಇದೇ ಪರಿಭಾಷೆ ಪರಿಕಲ್ಪನೆ ಸಾಧುವೆನಿಸುವಂಥಾದ್ದು. ಸಂಸಾರ-ಮೋಕ್ಷ ಎಂದಾಗಲೂ ಇದೇ ಅನ್ವಯಿಕವಾಗಿರುವುದು ಭಾಸವಾಗುವುದು. ಮೋಕ್ಷವಾದಾಗ ಸಂಸಾರ ಇಲ್ಲವಾಯಿತೇ ? ಸಂಸಾರವಿದ್ದಂತೆಯೇ ಮೋಕ್ಷವೂ ಸಾಧ್ಯ. ಮೋಕ್ಷವಾದಾಗ ಸಂಸಾರದ ಭಾಸವಾಗದಿರುವುದಷ್ಟೇ ಪರಿಕಲ್ಪನೆಯ ಪರಿಪಕ್ವತೆಯನ್ನು ಅರ್ಥೈಸಿಕೊಡುವುದು. ಈ ಹಿನ್ನೆಲೆಯಲ್ಲಿ ಜೀವನ್ಮುಕ್ತತೆಗೆ ಹೆಚ್ಚು ಸ್ಪುಟವಾದ ಅರ್ಥವ್ಯಾಪ್ತಿಯಾಗುವುದು ಶರೀರ ಮನಸ್ಸು ಆತ್ಮಗಳ ವಿಭಾಗೀಕರಣದಲ್ಲಿ ಆತ್ಮವು ಸ್ಥಾಯಿಯಾಗಿ ಅವಿನಾಶಿಯಾಗಿ ಇರುತ್ತದೆ. ಮನಸ್ಸು ಶರೀರಾದಿ ವಿಷಯಗಳು ಸಂಚಾರಿ ಭಾವದಲ್ಲಿ ನಾಶಗಾಮಿಯಾಗಿ ಇರುತ್ತವೆ. ಇವುಗಳನ್ನೇ ಆತ್ಯಂತಿಕವಾಗಿ ಅಸ್ತಿತ್ವದಲ್ಲಿ ಕಂಡುಕೊಳ್ಳುತ್ತಾ ಇವುಗಳನ್ನೆಲ್ಲಾ ಆತ್ಮದಂತಹ ದರ್ಪಣದಲ್ಲಿ ಲೇಪಿಸಿಕೊಂಡು ಆತ್ಮಭಾವವನ್ನೇ ಕಳೆದುಕೊಳ್ಳುವುದು ಅಂಧಕಾರಕ್ಕೆ ಕಾರಣವಾಗುವುದು. ಅಜ್ಞಾನಕ್ಕೆ ಪರಮೋಚ್ಛ ಸ್ಥಾನವನ್ನು ಕಲ್ಪಿಸಿಕೊಳ್ಳುವುದು ನಾಶಕಾರಿ ಎನಿಸುವುದು. ನಾಶವಿಲ್ಲದ ಸಾಕ್ಷೀಭಾವವನ್ನು ಉಳಿಸಿಕೊಳ್ಳುವುದೆಂದರೆ ಮನಸ್ಸು ಶರೀರಾದಿಗಳು ಇದ್ದಂತೆಯೇ ಆತ್ಮದ ದರ್ಪಣದಲ್ಲಿ ಅವುಗಳನ್ನು ಅಂಟಿಸಿಕೊಳ್ಳದೆ ದರ್ಪಣದ ಪ್ರತಿಪಲನ ಗುಣವನ್ನು ಶುದ್ಧ ಹಾಗೂ ಸ್ಪುಟವಾಗಿ ಇರಿಸಿಕೊಳ್ಳುವುದೇ ಸಾಕ್ಷೀಭಾವ. ನಾಶಗುಣದ ವಸ್ತುವಿನ ಆಘಾತವು ಅವಿನಾಶಿ ವಸ್ತುವಿನ ಮೇಲೆ ಆಗದಂತೆ ಇರುವ ಸಾತಥ್ಯ ಗುಣದ ಆಕಾಶಿ ಭಾವವೇ ಸಾಕ್ಷೀಭಾವ.
Posted by shree_acharya at 02:56 0 comments
ಮನಸ್ಸು ಮತ್ತು ಸಾಂಖ್ಯ
ಮನಸ್ಸನ್ನು ಶರೀರದಿಂದ ಪ್ರತ್ಯೇಕಿಸಿದರೆ ಆಗ ಅದು ಯೋಗ. ಮನಸ್ಸನ್ನು ಆತ್ಮದಿಂದ ಪ್ರತ್ಯೇಕಿಸಿದರೆ ಆಗ ಅದು ಸಾಂಖ್ಯ.
Posted by shree_acharya at 02:55 0 comments
ಆತ್ಮ ಮತ್ತು ಮನಸ್ಸು
ಆತ್ಮವು ಆಂತರ್ಯದ ಒಳಗಿನೊಂದು ದರ್ಪಣದಂತೆ. ಇದು ಸ್ವಚ್ಚ ಶುದ್ಧವಾಗಿದ್ದಲ್ಲಿ ಮನಸ್ಸಿನ ಯಾವ ಚಿತ್ರಗಳ ಪ್ರತಿಬಿಂಬಗಳು ದರ್ಪಣದಲ್ಲಿ ಮೂಡಿದರೂ ದರ್ಪಣಕ್ಕೆ ಅಂಟಿಕೊಳ್ಳಲಾಗದು . ಅಂಟಿಕೊಳ್ಳದೆ ಇದ್ದಾಗ ಒಳಗೆ ಯಾವ ಗಂಟೂ ಸಿಕ್ಕೂ ಇರಲಾರದು.
ಮನಸ್ಸಿನ ವಾಸನೆಗಳೊಂದಿಗೆ ಆತ್ಮವೋ ಬ್ರಹ್ಮವೋ ಬಂಧಿಯಾಗಿದ್ದಾಗ ಮಾತ್ರವೇ ಸಂಸಾರ. ಮನಸ್ಸಿನ ವಾಸನೆಗಳಿಂದ ಮುಕ್ತರಾದಾಗ ಸಂಸಾರದಿಂದ ಮುಕ್ತರು. ಸಂಸಾರದಲ್ಲಿಯೇ ನಾವಿದ್ದರೂ ಜೀವನ್ಮುಕ್ತರಂತೆ ಇರಬಹುದು.
Posted by shree_acharya at 01:49 0 comments
Friday, 1 May 2009
ಕೈವಲ್ಯ
ಚೇತನ ಮಾತ್ರವನ್ನೇ ಅನುಭವಿಸುವ ಒಂದು ಕೇವಲ ಸ್ಥಿತಿಯೇ ಕೈವಲ್ಯ. ಚೇತನ ಬಿಟ್ಟು ಯಾವ ವಿಚಾರವೂ ಇಲ್ಲದ ಅನುಭವವೇ ಕೈವಲ್ಯ. ಇದು ಚೈತನ್ಯ ಮಾತ್ರದ ಕಥಾನುಭವ. ಎಚ್ಚರ ಮಾತ್ರದ ಕಥಾನುಭವ. ಇದೊಂದು ಸಾಕ್ಷೀ ಸ್ಥಿತಿ ಅಥವಾ ಭಾವ. ಇಲ್ಲೊಂದು ಏಕೀಭಾವ ಅಥವಾ ಏಕಾಂಗಿ ಸ್ಥಿತಿ ಇರುವುದು. ಎಲ್ಲವನ್ನು ಕಾಣುವಂತೆ ಇದ್ದರೂ ಕಂಡದ್ದೆಲ್ಲಾ ಕನಸಷ್ಟೇ. ಕನಸಿನಂತಷ್ಟೇ. ಇಲ್ಲಿ ನಾನೆ ಇರುವುದು. ಮತ್ತೆ ಇನ್ನೇನೂ ಇಲ್ಲ. ಅಗಾಧ ಚೈತನ್ಯ ಸಾಗರದಲ್ಲಿ ಅರಗಿ ಲೀನವಾಗಿರುವ ಸ್ಥಿತಿ ಏನೇನೂ ಇಲ್ಲ. ಎಚ್ಚರದ ಸ್ಥಿತಿ.
ಜಗತ್ತಿನ ಎಲ್ಲ ವ್ಯಾಪಾರಗಳೂ ಇರುವುದು ಆಟಮಾತ್ರ. ಸಾಕ್ಷೀ ಒಂದು ಚೇತನ ಮಾತ್ರವೇ ಕೇವಲ ಸತ್ಯ. ದೃಷ್ಟ ಮಾತ್ರನೇ ಸತ್ಯ. ಇದೊಂದು ಜಾಗೃತ ಸ್ಥಿತಿ. ರಾತ್ರಿ ಗಾಢ ನಿದ್ರೆ. ಅನಂತದ ಜತೆ ಲೀನವಾಗುವ ಸ್ಥಿತಿ. ಚೇತನಗಳೆಲ್ಲಾ ಜಾಗೃತವಾದ ಸ್ಥಿತಿ. ಯಾರೋ ಕಳ್ಳ ಕಿಟಕಿ ಮುರಿಯುವ ಸಿದ್ಧತೆಯಲ್ಲಿ ಇದ್ದಾನೆ. ಈ ಜಾಗೃತ ಸ್ಥಿತಿ ಇದನ್ನು ನೋಡುತ್ತದೆ. ನಿದ್ರೆಯಿಂದ ಎಚ್ಚರವಾಗುತ್ತದೆ. ಎದ್ದು ದೀಪ ಬೆಳಗಿಸುತ್ತಲೇ ಕಳ್ಳ ಓಟಕಿತ್ತಿರುತ್ತಾನೆ. ಹೊರಗೆ ನಿದ್ರೆಯಿಂದ ಎಚ್ಚರವಾದಾಗಲೂ ನಮಗೆ ಈ ಸುದ್ದಿ ಮಾತ್ರ ಇಲ್ಲ. ಆದರೆ ನಮ್ಮ ಈ ಚೈತನ್ಯದ ಸ್ಥಿತಿ ಇದನ್ನು ಕೇವಲವಾಗಿ ಕಂಡಿದೆ. ತತ್ಸಂಬಂಧಿ ಕ್ರಿಯೆಗಳಲ್ಲಿ ತೊಡಗಿಸಿಕೊಂಡಿದೆ. ಈ ಆಂತರಿಕ ಎಚ್ಚರದ ಸ್ಥಿತಿಯನ್ನೇ ಸಾಕ್ಷೀಭಾವ ಎನ್ನುವುದು. ರಾತ್ರಿ ಮೂರು ಗಂಟೆಗೆ ಎದ್ದು ನಾಲ್ಕು ಗಂಟೆಯ ರೈಲನ್ನು ಹಿಡಿಯಲಿಕ್ಕಿದೆ. ಗಡಿಯಾರದ ಮುಳ್ಳು ಮೂರರಲ್ಲಿ ನಿಂತದ್ದೇ ಸರಿ, ತಕ್ಷಣ ಗಾಢ ನಿದ್ರೆಯಿಂದ ಎಚ್ಚರವಾಗುವುದು. ಇದು ನಮ್ಮೊಳಗಿರುವ ಸಾಕ್ಷೀಭಾವದ ಸೂಚನೆ. ಈ ಸಂಜ್ಞೆಯೇ ಎಚ್ಚರ. ಕೆಲವರಲ್ಲಿ ಇದು ಮಸುಕು ಮಸುಕಾಗಿರಬಹುದು. ಅಥವಾ ಅನುಭವಕ್ಕೆ ಬಾರದಿರಬಹುದು. ಇನ್ನು ಕೆಲವರಿಗೆ ಈ ಅನುಭವ ಅತ್ಯಂತ ತೀವ್ರತರವಾಗಿರಬಹುದು. ಸದಾ ಜಾಗೃತವಾಗಿರಬಹುದು. ಇದೇ ನಿಜವಾದ ಜಾಗೃತ ಅವಸ್ಥೆ. ಇದನ್ನೇ ಎಚ್ಚರ, ಜಾಗೃತಿ ಎನ್ನುವರು. ಇಂತಹ ಎಚ್ಚರದಲ್ಲಿಯೇ ಕಾಯುವಂತಿರಬೇಕು. ಈ ರೀತಿ ಎಚ್ಚರದಲ್ಲಿ ಜೀವಿಸುವವರು ಒಂದು ದಿನ ಎಚ್ಚರದಲ್ಲಿಯೇ ಸಾಯುವವರು ಕೂಡ. ಇಂತಹ ಎಚ್ಚರದಿಂದ ಸಾಯುವವರಿಗೆ ಬ್ರಹ್ಮರೂಪನದನೆಂಬ ಅನುಭವವಾಗುವುದು. ಇದು ಸಾಕ್ಷೀಭಾವ. ಶರೀರದಲ್ಲಿರುವ ಸುಪ್ತವಾಗಿರುವ ಚೇತನದೊಂದಿಗೆ ಇದರ ಅನುಭವವನ್ನು ಹೊಂದಬಹುದಾಗಿದೆ. ತದನಂತರ ಶರೀರಯಾಮದಿಂದ ಹೊರತಾಗಿಯೂ ಅನುಭವವನ್ನು ಪಡೆಯಬಹುದಾಗಿದೆ. ಇಂತಾದ ಎಚ್ಚರದ ಸ್ಥಿತಿಯಲ್ಲಿ ಶರೀರದ ಘಟ ಒಡೆದುಕೊಳ್ಳುವ ಘಟನೆಯಲ್ಲೂ ಸಾಕ್ಷೀಭಾವವು ಘಟ ಒಡೆಯುವ ಮೃತ್ಯುವೆಂಬ ಪ್ರಕ್ರಿಯೆಯನ್ನೂ ಅನುಭವಿಸಬಹುದು. ಈ ಎಚ್ಚರವೇ ಅಂತರಾಕಾಶದಲ್ಲಿ ವಿರಾಟಾಕಾಶದಲ್ಲಿ ಲೀನವಾಗುತ್ತದೆ. ಎಚ್ಚರದ ಕೇವಲ ಚೇತನವಾಗಿಯೋ ಆತ್ಮವಾಗಿಯೋ ಉಳಿಯುತ್ತದೆ. ಇಲ್ಲಿಂದ ಮತ್ತೊಂದು ಅದ್ಭುತ ಅಂತರ್ಯಾತ್ರೆ ಮುಂದುವರಿಯುವುದು. ಇಂತಹವರಿಗೆಂತು ಮೃತ್ಯು ಶತ್ರುವಾಗಲು ಸಾಧ್ಯ?
ಈ ಎಚ್ಚರವಂತ ಚೇತನರಿಗೆ ಮೃತ್ಯುವು ಮಿತ್ರನೇ. ಆತ್ಮ ಪರಮಾತ್ಮರ ಮಿಲನವು ಜೀವಂತ. ಜೀವನ ನಡೆಸುತ್ತಿರುವಾಗಲೂ ಎಚ್ಚರದ ಸ್ಥಿತಿಯಲ್ಲಿ ಸುಪ್ತವಾಗಿ ಗುಪ್ತವಾಗಿ ನಡೆಯುತ್ತಿರುತ್ತದೆ. ಇಂತಹ ಮಿಲನದ ಮಂದಿರದೊಳಗೆ ಮಹಾದ್ವಾರದಂತಿದೆ. ಧ್ಯಾನ ಪ್ರಕ್ರಿಯೆ ಇಂತಹ ಗಾಢತಮವಾದಂತೆ ಸಾಕ್ಷೀಭಾವವು ತೀವ್ರತರವಾಗುತ್ತಿರುತ್ತದೆ.
Posted by shree_acharya at 01:17 0 comments
Monday, 27 April 2009
Some of his poems...
(1)
ಸಂತನ ಹಾದಿ
ಲಿಪಿ ಅಂಬಲಪಾಡಿ (ಕಾವ್ಯ ನಾಮ )
ಸಂತನಿವ ಹೆದರುವುದಿಲ್ಲ ನಿಲ್ಲಲು
ತನ್ನ ನಿಲುವಿನಲ್ಲಿ ನೆಲೆಯಲ್ಲಿಯೊಂಟಿ
ದೊಡ್ಡ ಕೊಳ್ಳೆಯಿಲ್ಲ ದೊಡ್ಡ ಯೋಜನೆಯಿಲ್ಲ
ಸೋತರೂ ಆತನಿಗಿಲ್ಲ ಎನಿತು ದುಃಖ
ಗೆಲುವಿನಲ್ಲಿ ತನ್ನ ತಾನೆ ಪ್ರಶಂಸಿಸಿಕೊಳ್ಳುವುದಿಲ್ಲ
ಮೊನಚು ಶಿಕರವೆರಲೂ ಗಲಿಬಿಲಿಯಿಲ್ಲ
ನೀರಲ್ಲೇ ಮುಳುಗಿದರೂ ಒದ್ದೆಯಾಗುವುದಿಲ್ಲ
ಬೆಂಕಿಯಲ್ಲೇ ನಡೆದರೂ ಸುಟ್ಟುಹೋಗುವುದಿಲ್ಲ
ಅವರೋ ಪರಬ್ರಹ್ಮವನೆ ಬದುಕುವವರು
ಪ್ರಾಚೀನರಿವರು ಮನುಜರಾಗಿ ಮೊದಲು ಬಂದರು
ಸಾಂತರಿವರು ನಿದ್ರೆಯಲಿ ಕನಸು ಕಂಡಿಲ್ಲ
ಇವರು ನಿದ್ರೆಯಿಂದ ಎದ್ದಾಗಲೂ ಯಾವ ಚಿಂತೆಯೂ ಇಲ್ಲ
ಇವರ ಆಹಾರವೋ ಸರಳ ಉಸಿರು ಗಾಢ ನಿರಾಳ
ಉಸಿರು ಇವರ ಪಾದದ ಹೆಮ್ಮೆಟ್ಟಿನಿದಲೇ
ಉಳಿದವರದು ಉಸಿರುಕಟ್ಟಿದಂತೆ ಗಂಟಲ ಆಳದಲೇ
ವಿವಾದದಲ್ಲಿ ಇವರ ವಾದವೋ ವಾತಿಮಾಡಿದಂತೆ
ಕರುಣೆಯ ಚಿಲುಮೆಯಲ್ಲಿ ಅವಿತಿರುವುದೋ
ಪ್ರಾಚೀನರಿವರಿಗೆ ಜೀವನ ಕಾಮವೇ ಇಲ್ಲ
ಕಂಡರಿದನು ಸಗ್ಗದ ಕಾರಂಜಿಗಳೂ ಒಣಗುವವು
ಸಂತಸರೆ ದ್ವಾರವೆಂಬಂತೆ ಪ್ರವೆಶಿಸುವರಿವರಿಗೆ
ಮರಣವೆಂಬುದರ ಭೀತಿಯೂ ಇಲ್ಲ
ನಿರಗಮನದಲ್ಲಿಲ್ಲ ನೈರುದ್ಧ್ಯದ ನಿಲುವು
ಬರವೂ ಸರಳ ಸರಳ ತೆರವು
ಎಲ್ಲಿಂದ ಬಂದೆವೋ ಪ್ರಶ್ನೆಯೇ ಅಲ್ಲ ಅವು
ಎಲ್ಲಿಗೆ ಹೋಗುವಿರೆಂದರೋ ಬರಳುತ್ತರವು
ರಥಚಾಲನೆಗೆ ಸಿಂಡರಿಸದ ಮುಖವು
ಜೀವನದುದ್ದವೂ ವಿದಿತ ಹೋರಾಟವು
ಬಂದಂತೆ ಹೇಗಿದ್ದರೂ ಜೀವನ ಸ್ವೀಕಾರ
ಮರಣದಲೂ ಸಂತಸದಲೇ ಅದರ ಅದರ
ಬ್ರಹ್ಮದೊಂದಿಗೆ ಇವರ ಹೋರಾಟವಿಲ್ಲ
ಬ್ರಹ್ಮಪಥಕೆಂದೂ ಇವರು ಅಡ್ಡಿಯಲ್ಲ
ಸ್ವತಂತ್ರ ಮನ ಸಂಡವೇಳಲೋ ಯೋಚನೆಗಳು
ಇಲ್ಲ ಹುಬ್ಬುಗಳಲಿ ಗಂಟುಗಳು
ಮುಖಮುದ್ರೆಯದೂ ತೀವ್ರ ನಂಟು
ಮಳೆಗಾಲದಂತೆ ಇವರ ಸ್ಪರ್ಶ ಶೀತಲ
ಸೆಕೆಗಾಲದಂತಿಲ್ಲ ಇವರ ಹಿಡಿಯ ಕಾಲ
ಇವರಿಂದ ಬರುವುದೆಲ್ಲವೂ ಶಾಂತ
ಚತುಷ್ಕಾಲದ ಪ್ರಶಾಂತ ಅತಿಥಿ ಸಂತ
** ** **
Posted by shree_acharya at 05:25 0 comments
Heal your Life...
Shree Acharyaji has an uncanny insight to go into the problem given to him. He does, it seems , this by way of vast knowledge, experience & wisdom. He has been doing this all through his life in last 30 years. While doing these he appears to draw his solutions to his clients from more than 25 different dciplines
like "SHREEVIDHYA","TANTRA", "YANTRA", "MANTRA", "ASTROLOGY", "NUMEROLOGY", "VAASTHU", "SEMIOTICS", "FENG-SHUI" , "REKHA SHASTHRA", "I-CHING", "GRAPHOLOGY", GRAPHIKOLOGY", "PALMISTRY", "SYMBOLISM" & MANY MORE . He has been very use full to many people placed around India, US , UK , Japan & many other countries. He has served both individual & industries around the world. His guidelines in life have taken many to shape their respective & respect full callings. No problem is in generality prospective and every solution is very very specific to the problem. All remedies holistically and specific to the problem.
Posted by shree_acharya at 05:10 0 comments
ಉಪನಿಷತ್ ಗಳ ಬಗ್ಗೆ ....
ನನ್ನ ಮನೆ; ನನ್ನ ಕಾರು; ನನ್ನ ಊರು; ನನ್ನ ದೇಶ;
ಇವುಗಳಿಗೆಲ್ಲ ನಾನು ಮಾಲಕನಲ್ಲವಲ್ಲ!
ಅದು ನನ್ನದು ಹೇಗಾದೀತು?
ಇವುಗಳ ಬಗೆಗೆ ನನ್ನಲ್ಲಿ ಕೃತಜ್ಞತಾ ಭಾವ ಅನುಗ್ರಹೀತ ಭಾವ
ಇಲ್ಲದೇ ಹೋದಲ್ಲಿ ಅವು ನನ್ನದು ಹೇಗಾದಾವು ?
ಭಾವ ಒಂದಿದ್ದರೆ ಸಾಕು ಅದು ಸಾಕ್ಷಿಯಾಗಿರುತ್ತದೆ.
ಆಗ ನನ್ನ ಮಾಲಕನೂ ನಾನೇ !
ನನ್ನ ಮಾಲಕತ್ವವೂ ನನ್ನದೇ ; ಯಾವುದು ನನ್ನದಲ್ಲ.
ಎಲ್ಲವೂ ನನ್ನದೇ; ಎಲ್ಲವೂ ನಾನೇ; ನಾನು ಇಲ್ಲಿ ಸಾಕ್ಷಿ ಮಾತ್ರ.
ನಾನು ಅನುಗ್ರಹೀತ. ನಾನು ಕೃತಜ್ಞ.
ನನಗೆ ನಾನೇ ಕೃತಜ್ಞ. ಮತ್ತೆಲ್ಲದಕ್ಕೂ.
ಇಡಿ ವಿಶ್ವವೇ ನನ್ನದು. ಈ ವಿಶ್ವಕ್ಕೆ ಶರಣಾಗಿದ್ದೇನೆ. ಸಾಕ್ಷಿಯಾಗಿ.
ಜಗತ್ತಿನ ಎಲ್ಲ ವ್ಯಾಪಾರಗಳೂ ಇರುವುದು ಆಟಮಾತ್ರ. ಸಾಕ್ಷೀ ಒಂದು ಚೇತನ ಮಾತ್ರವೇ ಕೇವಲ ಸತ್ಯ. ದೃಷ್ಟ ಮಾತ್ರನೇ ಸತ್ಯ. ಇದೊಂದು ಜಾಗೃತ ಸ್ಥಿತಿ. ರಾತ್ರಿ ಗಾಢ ನಿದ್ರೆ. ಅನಂತದ ಜತೆ ಲೀನವಾಗುವ ಸ್ಥಿತಿ. ಚೇತನಗಳೆಲ್ಲಾ ಜಾಗೃತವಾದ ಸ್ಥಿತಿ. ಯಾರೋ ಕಳ್ಳ ಕಿಟಕಿ ಮುರಿಯುವ ಸಿದ್ಧತೆಯಲ್ಲಿ ಇದ್ದಾನೆ. ಈ ಜಾಗೃತ ಸ್ಥಿತಿ ಇದನ್ನು ನೋಡುತ್ತದೆ. ನಿದ್ರೆಯಿಂದ ಎಚ್ಚರವಾಗುತ್ತದೆ. ಎದ್ದು ದೀಪ ಬೆಳಗಿಸುತ್ತಲೇ ಕಳ್ಳ ಓಟಕಿತ್ತಿರುತ್ತಾನೆ. ಹೊರಗೆ ನಿದ್ರೆಯಿಂದ ಎಚ್ಚರವಾದಾಗಲೂ ನಮಗೆ ಈ ಸುದ್ದಿ ಮಾತ್ರ ಇಲ್ಲ. ಆದರೆ ನಮ್ಮ ಈ ಚೈತನ್ಯದ ಸ್ಥಿತಿ ಇದನ್ನು ಕೇವಲವಾಗಿ ಕಂಡಿದೆ. ತತ್ಸಂಬಂಧಿ ಕ್ರಿಯೆಗಳಲ್ಲಿ ತೊಡಗಿಸಿಕೊಂಡಿದೆ. ಈ ಆಂತರಿಕ ಎಚ್ಚರದ ಸ್ಥಿತಿಯನ್ನೇ ಸಾಕ್ಷೀಭಾವ ಎನ್ನುವುದು. ರಾತ್ರಿ ಮೂರು ಗಂಟೆಗೆ ಎದ್ದು ನಾಲ್ಕು ಗಂಟೆಯ ರೈಲನ್ನು ಹಿಡಿಯಲಿಕ್ಕಿದೆ. ಗಡಿಯಾರದ ಮುಳ್ಳು ಮೂರರಲ್ಲಿ ನಿಂತದ್ದೇ ಸರಿ, ತಕ್ಷಣ ಗಾಢ ನಿದ್ರೆಯಿಂದ ಎಚ್ಚರವಾಗುವುದು. ಇದು ನಮ್ಮೊಳಗಿರುವ ಸಾಕ್ಷೀಭಾವದ ಸೂಚನೆ. ಈ ಸಂಜ್ಞೆಯೇ ಎಚ್ಚರ. ಕೆಲವರಲ್ಲಿ ಇದು ಮಸುಕು ಮಸುಕಾಗಿರಬಹುದು. ಅಥವಾ ಅನುಭವಕ್ಕೆ ಬಾರದಿರಬಹುದು. ಇನ್ನು ಕೆಲವರಿಗೆ ಈ ಅನುಭವ ಅತ್ಯಂತ ತೀವ್ರತರವಾಗಿರಬಹುದು. ಸದಾ ಜಾಗೃತವಾಗಿರಬಹುದು. ಇದೇ ನಿಜವಾದ ಜಾಗೃತ ಅವಸ್ಥೆ. ಇದನ್ನೇ ಎಚ್ಚರ, ಜಾಗೃತಿ ಎನ್ನುವರು. ಇಂತಹ ಎಚ್ಚರದಲ್ಲಿಯೇ ಕಾಯುವಂತಿರಬೇಕು. ಈ ರೀತಿ ಎಚ್ಚರದಲ್ಲಿ ಜೀವಿಸುವವರು ಒಂದು ದಿನ ಎಚ್ಚರದಲ್ಲಿಯೇ ಸಾಯುವವರು ಕೂಡ. ಇಂತಹ ಎಚ್ಚರದಿಂದ ಸಾಯುವವರಿಗೆ ಬ್ರಹ್ಮರೂಪನದನೆಂಬ ಅನುಭವವಾಗುವುದು. ಇದು ಸಾಕ್ಷೀಭಾವ. ಶರೀರದಲ್ಲಿರುವ ಸುಪ್ತವಾಗಿರುವ ಚೇತನದೊಂದಿಗೆ ಇದರ ಅನುಭವವನ್ನು ಹೊಂದಬಹುದಾಗಿದೆ. ತದನಂತರ ಶರೀರಯಾಮದಿಂದ ಹೊರತಾಗಿಯೂ ಅನುಭವವನ್ನು ಪಡೆಯಬಹುದಾಗಿದೆ. ಇಂತಾದ ಎಚ್ಚರದ ಸ್ಥಿತಿಯಲ್ಲಿ ಶರೀರದ ಘಟ ಒಡೆದುಕೊಳ್ಳುವ ಘಟನೆಯಲ್ಲೂ ಸಾಕ್ಷೀಭಾವವು ಘಟ ಒಡೆಯುವ ಮೃತ್ಯುವೆಂಬ ಪ್ರಕ್ರಿಯೆಯನ್ನೂ ಅನುಭವಿಸಬಹುದು. ಈ ಎಚ್ಚರವೇ ಅಂತರಾಕಾಶದಲ್ಲಿ ವಿರಾಟಾಕಾಶದಲ್ಲಿ ಲೀನವಾಗುತ್ತದೆ. ಎಚ್ಚರದ ಕೇವಲ ಚೇತನವಾಗಿಯೋ ಆತ್ಮವಾಗಿಯೋ ಉಳಿಯುತ್ತದೆ. ಇಲ್ಲಿಂದ ಮತ್ತೊಂದು ಅದ್ಭುತ ಅಂತರ್ಯಾತ್ರೆ ಮುಂದುವರಿಯುವುದು. ಇಂತಹವರಿಗೆಂತು ಮೃತ್ಯು ಶತ್ರುವಾಗಲು ಸಾಧ್ಯ?
ಈ ಎಚ್ಚರವಂತ ಚೇತನರಿಗೆ ಮೃತ್ಯುವು ಮಿತ್ರನೇ. ಆತ್ಮ ಪರಮಾತ್ಮರ ಮಿಲನವು ಜೀವಂತ. ಜೀವನ ನಡೆಸುತ್ತಿರುವಾಗಲೂ ಎಚ್ಚರದ ಸ್ಥಿತಿಯಲ್ಲಿ ಸುಪ್ತವಾಗಿ ಗುಪ್ತವಾಗಿ ನಡೆಯುತ್ತಿರುತ್ತದೆ. ಇಂತಹ ಮಿಲನದ ಮಂದಿರದೊಳಗೆ ಮಹಾದ್ವಾರದಂತಿದೆ. ಧ್ಯಾನ ಪ್ರಕ್ರಿಯೆ ಇಂತಹ ಗಾಢತಮವಾದಂತೆ ಸಾಕ್ಷೀಭಾವವು ತೀವ್ರತರವಾಗುತ್ತಿರುತ್ತದೆ.
ಈ ಲೇಖನವನ್ನು http://shreeacharya.blogspot.com/2009/05/blog-post.html ಬ್ಲಾಗಿನಿಂದ ತರಲಾಗಿದೆ, ಕಾರಣ ಈ ಮೇಲೆ ತಿಳಿಸಲಾದ ಬ್ಲಾಗಿನಲ್ಲಿ ಫಾಂಟ್ ಓದಲು ಬಾರದಂತೆ ಇದ್ದುದರಿಂದ ನನ್ನ ಬ್ಲಾಗಿನಲ್ಲಿ ಕಾಪಿ ಪೇಸ್ಟ್ ಮಾಡಿದ್ದೇನೆ ಶ್ರೀ ಅಚಾರ್ಯ ಅವರು ಇದು ತಪ್ಪೆನಿಸಿದಲ್ಲಿ ದಯವಿಟ್ಟು ತಿಳಿಸಿ ಅಳಿಸಿಹಾಕುತ್ತೇನೆ.
ದೇವರು-೪
ಪರಮಾತ್ಮನ ಹೊರಗೆ ಇರಲು ಕೊದಿ
ಸ್ವಲ್ಪ ಸಮಯ ಸ್ವಲ್ಪ ಸ್ಥಾನ ಸೌಲಭ್ಯ
ಸಾಗರದ ಮೀನು
ಎಂದು ಕಳಕೊಂಡೀತು ಸಾಗರವನ್ನು
ಕಳೆದುಕೊಂಡುದನು ಕನಸಿನಲು
ಹಾಗೆಯೇ ನಾವು ಕಾಣುವೆವು ಪರಮಾತ್ಮನನು ಎಚ್ಚರದಲ್ಲವೇಕೋ
ಯಾವ ಅಲೆಗಳೂ ನಮ್ಮನ್ನೆಸೆಯಲಾರವು ಪರಮಾತ್ಮಸಾಗರದಲಿ
ಬೆಸ್ತನೂ ಇಲ್ಲ ತಟವೂ ಇಲ್ಲ
ಈ ಮೂರ್ಛೆ ಈ ಭ್ರಮೆ ಕಳೆದರೆ
ಉಳಿಯುವುದೇನು ಪರಮಾತ್ಮ
ಬೇರೆಬೇರೆಯಾಗಿ ಪರಮಾತ್ಮನನ್ನು ಕಾಣುವ ಕಣ್ಣುಗಳಿಗೆ
ಪರಮಾತ್ಮ ನಿಜಕ್ಕೂ ಕಂಡಿರುವನೇನು?
ಅಜ್ಞಾತ ಪರಮಾತ್ಮನ ತಿಳಿಯಲು
ಆ ವಿಚಾರವೇ ಮಾರ್ಗ
ನಿಸ್ತರಂಗ ದರ್ಪಣದ
ಮೇಲಿನ ಪ್ರತಿಬಿಂಬ ಪರಮಾತ್ಮ
ದನ್ಯತಾಭಾವದ ಮೋಡಗಳಿಲ್ಲವಾದರೆ
ಮಳೆಯಾದರೂ ಎಂದು ಸುರಿದೀತು
ನಿಮ್ಮ ಭಾಷೆಯಿಂದ
ಅಸ್ತಿತ್ವಕ್ಕೇನು ಆಗಬೇಕಾದ್ದಿದೆ
ಹುಲ್ಲುಕಡ್ಡಿಯೊಂದು ಅದಾವುದೋ ತಾರೆಯೊಂದಿಗೆ
ಸಲ್ಲಾಪಿಸುವುದನ್ನು ಕಂಡೆ
ಅಘಾತದಂತೆ ಸುರಿಯುತ್ತಿದೆ
ಪರಮಾತ್ಮನ ಅನುಕಂಪ
ಸಾಗರವನ್ನೂ ನೋಡಲಾಗದಂತೆ
ನಾವೂ ಕುರುಡರಂತೆ
ಯಾವಾಗಲೂ ಚಿಂತೆ
ನಮಗೆ ಅವನದೇ
ಅವನಿಗೋ ನಮ್ಮದೇ
ಅದೇ ಧರ್ಮ
ದ್ರುವಗಳಲ್ಲಿ ಹೆಪ್ಪುಗಟ್ಟಿ
ಸಾಗರದಲ್ಲಿ ನೀರು ನೀರಾಗಿ
ಮೋಡದಲ್ಲಿ ಹನಿಹನಿಯಾಗಿ
ಅಲ್ಲಿರುವವನಾರಲ್ಲಿ
ಈ ಅಸ್ತಿತ್ವದಿಂದಲೇ ಉಂಡು
ಈ ಅಸ್ತಿತ್ವವನ್ನೇ ಒಂದು ದಿನ ಸೇರುವ
ನಮಗೇಕೆ ಇದರ ಮೇಲಿಲ್ಲ ಪ್ರೇಮ
ಪ್ರೇಮದಿಂದ ಮಾಡಿದ್ದು ಧಾರ್ಮಿಕತೆಯಿಂದಾದರೆ
ಭಯದಿಂದ ಮಾಡಿದ್ದೆಲ್ಲವೂ ಅಧಾರ್ಮಿಕತೆ ಅಲ್ಲವೇನು
ಬೊಬ್ಬೆ ಹಾಕಬೇಡಿ
ದಮ್ಮಯ್ಯ ಕಿವುಡನಲ್ಲ ಆತ
ಕೇಳಿ ಕೇಳಿ ಆತನೇ
ಕಳೆಯುತ್ತಿದ್ದಾನೆ ಸಾರಿ ಸಾರಿ
ಕೊಡು ಕೊಡು ಎಂದು ಸಾವಿರ ಸಾರಿ
ಬೇಡಿದರೂ ಕೊಡಲೊಲ್ಲದ ದೇವ
ತೆಗೋ ಎಂದಂತಾದಾಗ
ಬಡತನ ನೀಗೀತು
ಸಿರಿತನ ಬೆಳಗಿತ್ತು ಪಡೆದು ಪಡೆದು
ಸಾಗರದಲ್ಲಿ ಮೀನು
ನೀರನ್ನು ಎಷ್ಟಾದರೂ ಹುಡುಕೀತೋ
Posted by shree_acharya at 14:13 0 comments
ದೇವರು-೩
ಪರಮಾತ್ಮನಿಗೆ ಇನ್ನೆಲ್ಲಿದೆ ದೂರ
ಅದೇ ಯೋಗ
ಪರಮಾತ್ಮನೆಲ್ಲೋ ಅನತಿದೂರದಲ್ಲಿ
ಅದೇ ರೋಗ
ಪರಮಾತ್ಮನೆಲ್ಲೋ ಪ್ರಪಂಚವಿಲ್ಲ
ಅದೇ ಭೋಗ
ಸಕಾರಣವೆಲ್ಲವೂ ಸಂಸಾರದ ಅಂಗ
ಅಕಾರಣವೆಲ್ಲವೂ ಪರಮಾತ್ಮ ಸಂಗ
ಎಲ್ಲರೂ ಕೇಳುತ್ತಾರೆ ಜಾತಿ ಏಕಿವರಿಗೆ ನನ್ನ ಜಾತಿ
ತಿಳಿದಿರುವುದೇನು ಇವರಿಗೆ ಪರಮಾತ್ಮನ ಜಾತಿ
ಅವನದೇ ನನ್ನದೂ
ತಿಳಿದೂ ತಿಳಿದೂ ತಿಳಿಯದಾದಂತಾಯಿತೋ
ಪರಿಚಯವಾಗಿಯೂ ಅಪರಿಚಿತದಂತಾಯಿತೋ
ಅರಿತೂ ಅರಿತೂ ಅರಿಯದಂತಾಗಿ ಉಳಿಯಿತೋ
ಅಪ್ಪಿ ಬಿಗಿದಪ್ಪಿಕೊಂಡರೂ ತಪ್ಪಿಸಿಕೊಂಡೇಹೋಯಿತೋ
ಅಟ್ಟಿಬೆನ್ನತ್ತಿಹೋದರೋ ರಹಸ್ಯವನ್ನೇ ಬಿಟ್ಟು ಹೋಯಿತೋ
ಅಜ್ಞಾತವೇನೋ ಪರಮಾತ್ಮನೇನೋ
ಅನೇಕತೆ ಕಂಡಲ್ಲೆಲ್ಲ ಸಂಸಾರ
ಏಕತೆ ಕಂಡಲ್ಲೆಲ್ಲ ಭಗವಂತ
ದಿನವೂ ಅವನದೇ ರಾತ್ರಿಯೂ ಪ್ರಕಾಶವೂ ಅವನದೇ
ಅಂಧಕಾರವೂ ಅವನ ಅಂಧಕಾರದಲ್ಲೂ ಶಾಂತಿ
ಅವನ ರಾತ್ರಿಯಲ್ಲೂ ಸೌಂದರ್ಯ ರಾತ್ರಿಯ ಅಂಧಕಾರದ ಭಯ
ಅವನಲ್ಲಿ ಪೂರ್ವಾಗ್ರಹ ಬೇಡ ಅವನೋ ಪ್ರೇಮಗಂಗೆಯೇನೋ
ಅದಾರು ಹಿಡಿದರು ಅದಾರು ತುಂಬಿಕೊಂಡರು
ಅದೋ ಒಂದು ವಿರಾಟ
ಸಿಗುವುದೇನೋ ರಜಾ ಎಂದಾದರೂ ಎಂತಾದರೂ
ಸಂತತ್ವಕ್ಕೆ ಸಾಧುತ್ವಕ್ಕೆ
ಎಂದು ಬಿಡುಗಡೆ ಯಾರಿಗಾದರೂ ಪ್ರೇಮದಿಂದ
ಇಲ್ಲೇ ಇಗಲೇ ಇಂದೇ ನಮಗೆ ಪರಮಾತ್ಮನನ್ನು ನೋಡಬೇಕೆಂಬಾಸೆಯೇನು
ನಾಳೆ ನೋಡಿದರಾಗುವುದಿಲ್ಲವೇನು
ಮರಳು ಯಾರದು ಸಾಗರ ಯಾರದು
ನಾವೆಲ್ಲಿದ್ದರೇನಂತೆ ಅಲ್ಲೇ ಇದೆ
ಏನೋ ಸುಗಂಧ ಆಹ್ಲಾದ
ಶ್ರದ್ಧಾಸುಮ ಅರಳುವಲ್ಲಿ
ಅದೋ ನೋಡಿ ಪೂರ್ವದಲ್ಲಿ ಬೆಳಗಿನ ಜಾವದ ಕೊನೆಯ ನಕ್ಷತ್ರ
ಅದೇ ಜಗತ್ತು
ಸಂಸಾರವನ್ನು ನೋಡುವ ಕಣ್ಣಲ್ಲಿ ಪರಮಾತ್ಮನನ್ನು ಎಂತು ನೋಡಲಿ
ಪರಮಾತ್ಮನಿಂದ ಹೊರಗೆ ಇರಲು ಕೊಡಿ ಸ್ವಲ್ಪ ಸಮಯ
ಸ್ವಲ್ಪ ಸ್ಥಾನ ಸ್ವಲ್ಪ ಸೌಲಭ್ಯ
ಸಾಗರದ ಮೀನು ಎಂತು ಕಳೆದುಕೊಂಡೀತು ಸಾಗರವನ್ನು
ಕಳೆದುಕೊಂಡುದನು ಕನಸಿನಲು
ಹಾಗೆಯೇ ನಾವು ಕಾಣುವೆವು ಪರಮಾತ್ಮನನು ಎಚ್ಚರದಲ್ಲಲ್ಲವೇಕೆ
ಯಾವ ಅಲೆಗಳೂ ನಮ್ಮನ್ನೆಸೆಯಲಾರವು ಪರಮಾತ್ಮ ಸಾಗರದಲ್ಲಿ
ಬೆಸ್ತನೂ ಇಲ್ಲ ತಟವೂ ಇಲ್ಲ
ಈ ಮೂರ್ಛೆ ಈ ಭ್ರಮೆ ಕಳೆದರೆ ಉಳಿಯುವುದೇನು
ಪರಮಾತ್ಮ
ಬೇರೆಬೇರೆಯಾಗಿ ಪರಮಾತ್ಮನನ್ನು ಕಾಣುವ ಕಣ್ಣುಗಳಿಗೆ
ಪರಮಾತ್ಮ ನಿಜಕ್ಕೂ ಕಂಡಿರುವನೇನು
ಅಜ್ಞಾತ ಪರಮಾತ್ಮನ ತಿಳಿಯಲು
ಆ -ವಿಚಾರವೇ ಮಾರ್ಗ
ನಿಸ್ತರಂಗ ದರ್ಪಣದ ಮೇಲಿನ ಪ್ರತಿಬಿಂಬ
ಪರಮಾತ್ಮ
ಧನ್ಯತಾಭಾವದ ಮೋಡಗಳಿಲ್ಲವಾದರೆ
ಮಳೆಯಾದರೂ ಎಂದು ಸುರಿದೀತು
ಅಸ್ತಿತ್ವಕ್ಕೇನು ನಿಮ್ಮ ಭಾಷೆಯಿಂದ ಆಗ ಬೇಕಾದ್ದಿದೆ
Posted by shree_acharya at 14:06 0 comments
ದೇವರು-೨
ಬರಿಯ ವರ್ತನೆ ಭಾವನೆ ನಡತೆಗಳೇ ಮನುಷ್ಯ..
ಹೊಸ ಚಿಗುರು ಹೊಸ ಮೊಗ್ಗು ಹೊಸ ಹೂ ಅಸ್ತಿತ್ವದ ಕೊಡುಗೆ.
ಪ್ರೇಮಕ್ಕೆ ಕಾರಣ ಬೇಡ
ಪ್ರೇಮಕ್ಕೆ ಇತಿಯೂ ಇಲ್ಲ ಮಿತಿಯೂ ಇಲ್ಲ..
ಎಲ್ಲ ಪದ ಪ್ರಶ್ನೆಗಳು ಕರಗಿ ಆವಿಯಾದ ನಂತರ ಉಳಿಯುವ ರಹಸ್ಯ ವಿಸ್ಮಯ ಪರಮಾತ್ಮ.
ಒಂದೊಂದು ಅಣುವಿನಲ್ಲೂ ಎಲೆ ಎಲೆಯಲ್ಲೂ ಅಲೆಅಲೆಯಲ್ಲೂ ಮೊದದಲ್ಲೂ ನಂತರದಲ್ಲೂ ಪ್ರಶ್ನಾರ್ಥಕ ಚಿಹ್ನೆ.
ಇಲ್ಲೇ ಈಗಲೇ ಸತ್ತು ಬಿದ್ದಿರುವ ದೇವರನ್ನು ಇನ್ನೆಲ್ಲಿ ಹುಡುಕಲಿ..
ಅಲೆ ಅಲೆಗಳಲಿ ಆಲಿಸಬೇಕು ಅಸ್ತಿತ್ವದ ಅಸಲು.
ಬೆಳೆಸಿಕೊ ಗುಲಾಬಿಯನ್ನು ನಿನ್ನೊಳಗೆ ಯಾಕೆ ಕೀಳುತ್ತಿರುವೆ ಹೊರಗೆ ಇರುವುದನ್ನು..
ಭಗವಂತ ಸೃಷ್ಟಿಸಿದುದರಲ್ಲಿ ಇಲ್ಲಿ ಎಲ್ಲಿ ಬಿರುಕುಯೋನಿ ಇಲ್ಲ..
ಕಾರಣದಲ್ಲಿ ಕಾವ್ಯ ಅರಳುವುದು
ಹೂವಿನಂತೆ
ಪ್ರತಿ ಮಾನವನು
ತನ್ನದೇ ಪರಿಪೂರ್ಣ ಜೀವನದ ಪ್ರತೀಕ
ಎಲ್ಲದರಲ್ಲೂ
ಅದರದ್ದೇ ಅದೊಂದು ನಿಗೂಡತೆ ಗರ್ಭಿತ
ನಿಸರ್ಗದ ಕಣಕಣದಲ್ಲೂ
ನಿಸರ್ಗದ್ದೇ ಶಕ್ತಿ ತಾಣಗಳು ಮಾನಗಳು
ಒಂದು ಹನಿ ಇಬ್ಬನಿಯಲ್ಲಿ ಇಡಿಯ ವಿಶ್ವ
ಗೋಳದಲ್ಲಿ ತಿರುಗುವುದು
ನಮ್ಮ ಒಳಗಿನ ಆತ್ಮ ಒಂದು ಬಾವನೆಯಾದರೆ
ಹೊರಗೆ ಅದೊಂದು ನ್ಯಾಯ
ಪಾಚಿಯಲ್ಲೂ ಬಲೆಯಲ್ಲೂ ಸರ್ವಾಂತರ್ಯಾಮಿತ್ವದ ವಿಸ್ತೃತ ಜಾಲವಿದೆ
ಕಾಣುವ ಕಣ್ಣು ಇದೆ
ಎಲ್ಲ ಬಿಂದುಗಳಲ್ಲೂ ವಿಶ್ವದ ಮೌಲ್ಯವು
ಹುದುಗಿದ್ದೇ
ಒಳ್ಳೆಯದಿದೆಯೋ
ಕೆಟ್ಟದ್ದೂ ಇದ್ದೇ ಇದೆ
ಆತ್ಮೀಯತೆಯಲ್ಲಿ ದೂರವಿದೆ ವಿಸ್ತಾರವಿದೆ
ಪ್ರೇಮದಲ್ಲಿ ತಲ್ಲೀನತೆ ಇದೆ
ಸನಾತನ ಪ್ರಕಾಶ ನನಗೂ ಅಲ್ಲ ನಿನಗೂ ಅಲ್ಲ
ಎಲ್ಲರಿಗೂ ಸೇರಿದ್ದು
ಪಾರಮಾರ್ಥಿಕದಲ್ಲಿ ತೃಪ್ತರಾಗಿ ಬಿಡುವುದು
ಆತ್ಮಘಾತಕ
ಮೊಳಕೆ ಅಂಧಕಾರದಲ್ಲಿಯೇ
ಬೆಳಕನ್ನು ಸಹಿಸದು
ಬಿಜವೇಕೆ ಗೂಢವಾಗಿ ಭೂಮಿಯೊಳಗೆ
ಮೊಳೆಯುವುದು ಬೆಳೆಯುವುದು
ಪರಮಾತ್ಮನೆಲ್ಲಿ ನಡೆಯುತ್ತಾನೆ
ಅವನೋ ನರ್ತಿಸುತ್ತಾನೆ ಹಾಡುಗಬ್ಬವಾಡುತ್ತಾನೆ
ರಹಸ್ಯದರ್ಶಿ ಖಾಲಿ ಬಿದಿರಿನ ಕೊಳಲು
ತಾಯಿ ಯಾರು ತಾಯಿತನವೇನು
ಇದನ್ನಾರು ಹೇಳಬೇಕು ಇದರಲ್ಲರು ಇರಬೇಕು
ದೇವಾಲಯದಲ್ಲಿರುವ ವಿಗ್ರಹವೊಂದು ದರ್ಪಣವೆಂದು
ನಮ್ಮಂತೆ ನಿಮ್ಮಂತೆ
ಎಲ್ಲೆಂದರಲ್ಲಿ ಹಾರಲಾಗದ ವಿಮಾನಕ್ಕಿಂತ ಒಂದು ಹಕ್ಕಿ ಚಂದ
ಇದರ ಕೃತಿಕಾರನಿನ್ನೆಷ್ಟು ಚಂದವಾಗಿರಬಹುದೋ ಕಾಣಲೂ ಸಿಗೋಲ್ಲ
ಎಣಿಸಿಕೊಂಡರೂ ಬರೋಲ್ಲ
Posted by shree_acharya at 14:05 0 comments
Thursday, 11 June 2009
ದೇವರು
ದೇವರ ಅಸ್ತಿತ್ವವೆಂದರೆ ಉಪಸ್ಥಿತಿ ಅನುಪಸ್ಥಿತಿಯಂತೆ ಅನುಪಸ್ಥಿತಿಯೇ ಉಪಸ್ಥಿತಿಯಂತೆ.
ದೇವರು ಎಲ್ಲೂ ಕಾಣದಿರುವುದರಿಂದಲೇ ಎಲ್ಲೆಲ್ಲೂ ಇದ್ದಾನೆ. ಇರದ ಎಂದು ತಾಣವೂ ಇಲ್ಲ.
ನಿನ್ನನ್ನೇ ಎಲ್ಲೆಲ್ಲೂ ಕಾಣುವ ಭಕ್ತನಿಗೆ ನೀನೆಲ್ಲೂ ಕಾಣುವುದಿಲ್ಲ. ನಿನ್ನಂತೆ ಅವನು ರೂಪರಹಿತನಾದರೆ ಅವನೂ ಎಲ್ಲೂ ಕಾಣುವುದಿಲ್ಲ. ನಮ್ಮೊಳಗಿನ ಈ ಆಂತರಿಕ ಸಂವಾದ ಏನು?
ಹುಡುಕಿ ಹುಡುಕಿ ನಾನು ನನ್ನನ್ನೇ ಕಳೆದುಕೊಂಡು ಬಿಟ್ಟೆ. ಅವನು ಸಿಕ್ಕೇ ಬಿಟ್ಟ.
ಹುಡುಕು ಸಿಗೋಲ್ಲ. ಹುಡುಕಬೇಡ ಸಿಗುತ್ತೆ. ಯಾಕೆ ಗೊತ್ತಾ?
ಅದು ಅಲ್ಲೇ ಈಗಲೇ ಇದೆ. ಭಕ್ತನೆಲ್ಲಿದ್ದಾನೆ ಅಲ್ಲಿಲ್ಲ ದೇವರು. ಭಕ್ತನೆಲ್ಲಿ ಇಲ್ಲವೊ .. ಅಲ್ಲೇ ಇದ್ದಾನೆ ದೇವರು.
ಭಕ್ತನಿಗೆ ತಿಳಿದಿದೆ ನಾನಿದ್ದಲ್ಲಿ ದೇವನಿರುವುದಿಲ್ಲವೆಂದು ಅದಕ್ಕೆ ದೇವರನ್ನು ಇಟ್ಟಿದ್ದಾನೆ ಮೂರ್ತಿಯೊಳಗೆ.
ಪರಮಾತ್ಮನೇನೋ ದೂರದಲ್ಲಿದ್ದಾನಂತೆ, ಇಲ್ಲೇನಿದೆ? ಈಗೇನು?
ಪರಮಾತ್ಮ ಸ್ವರೂಪ ಒಬ್ಬ ಕವಿ ಹೊರಡಿಸುವ ಅಹಂಕಾರ ರಹಿತ ಕವಿತೆ.
ಅದು ಹೇಗೆ ರಾತ್ರಿಯಲ್ಲೂ ಕರುಣೆಯ ಬೆಳಕು ಬೆಳಗುತಿರುವುದೋ ನಿರಂತರ?
ಏನಿದು ಕೊತ್ತದ್ದರ ಹತ್ತು ಪಟ್ಟು ಬಿತ್ತಿಕೊಡುವ ಮೊಳೆಯುವ ಈ ಹನಿಬೀಜ?
ಎಂತೋ ಸಾಗರವಾಯಿತಲ್ಲ....!
ಚಿತ್ತದಾಳದ, ಕಮಲನಾಳದ, ಅತ್ಯಾಳದ ಭಾವ ಭಾವೈಕ್ಯತೆಯೇ ಪರಮಾತ್ಮ.
ಅಸ್ತಿತ್ವ ನನ್ನನ್ನು ಪ್ರೇಮಿಸುತ್ತದೆ ಹೂವಿನಂತೆ. ಹೂವಿನ ಮೇಲೆರಗುವ ಇಬ್ಬನಿಯಂತೆ. ಆಕಾಶವನೇ ಹೊಡೆಯುವಂತೆ. ನೀರು ಹರಿದಂತೆ, ನಿರ್ಮಲ.
ಅವಕಾಶವೆಂದರೆ ಅಸ್ತಿತ್ವ, ಅದು ಇಲ್ಲಿ ಈಗ.
ಎಲ್ಲವನ್ನು ಹೇಳಬಲ್ಲ ಆ ಒಂದು ಸಾಲು ಮರೆತೇ ಹೋಗಿದೆ, ಹೇಗೆ ಹೇಳಲಿ ಅದನು.
ಎಂತ ವಿಸ್ಮಯ, ಏನು ಅದ್ಭುತ?
ಅಬ್ಬಾ ರಹಸ್ಯವೇ, ಇದೊರಳಗೆ ವಿವೇಕ...
ರವಿ ಮೂಡುತಿದೆ.. ಹಕ್ಕಿ ಹಾಡುತಿದೆ.. ಹೂ ಅರಳುತಿವೆ..ತಾರೆಗಳು ಮಿನುಗುತಿವೆ.. ಚಂದ್ರ ಹಾಲು ಚೆಲ್ಲುವ.. ಜೀವನವೆಲ್ಲಾ ಆನಂದ ಪುಲಕಿತ..
ಅತೀತ ಪಶುತ್ವ.
ಭವಿಷ್ಯ ಪರಮಾತ್ಮ.
ನಡುವೆ ಮನುಷ್ಯತ್ವ.
ಅದ್ಭುತ ಪ್ರಕಾಶದ ಸಾಧ್ಯತೆ.. ಮನುಷ್ಯ.
Posted by shree_acharya at 09:55 0 comments
Monday, 8 June 2009
ಧರ್ಮ - ವಿವೇಕ
ಧರ್ಮ ಎಂಬುದೊಂದಿದ್ದರೆ ಮಾತ್ರ ಜೀವನದಲ್ಲಿರುವುದು ಸಾಧ್ಯ. ವ್ಯರ್ಥವಾದ ಊಹಾಪೋಹಕ್ಕೂ ಧರ್ಮಕ್ಕೂ ಅನ್ಯಥಾ ಸಂಬಂಧ ಇರಲಾರದು.
ಆತ್ಮವು ಒಂದು ಚೈತನ್ಯ; ಚೇತನ.
ವಿಚಾರಗಳಿಂದ ಸಿದ್ಧಾಂತಗಳಿಂದ ಮುಕ್ತವಾಗಿರುವ ಚೇತನವೇ ಧಾರ್ಮಿಕ ಚೇತನ.
ಧಾರ್ಮಿಕ ಚಿತ್ತ ಕಾಲ್ಪನಿಕ ಚಿತ್ತವಲ್ಲ.
ಭಯಕ್ಕೂ ಧರ್ಮಕ್ಕೂ ಸಂಬಂಧವಿಲ್ಲ; ಭಯಕ್ಕೂ ದೇವರಿಗೂ ಸಂಬಂಧ.
ಧಾರ್ಮಿಕರ ಕೈಯಲ್ಲಿ ಇಲ್ಲ ಧರ್ಮ.
ಧರ್ಮ ಎಂದರೆ ಅಭಯ. ಧರ್ಮ ಎಂದರೆ ಎಲ್ಲ ಭಯಗಳಿಂದ ವಿಮೋಚನೆ.
ಧರ್ಮವು ನಂಬಿಕೆಯಲ್ಲ.
ಧರ್ಮವು ಕುರುದುತನವಲ್ಲ. ಕಣ್ಣುಗಳ ಸೂಕ್ಷ್ಮತೆ.
ಶೋಷಣೆಯ ಪ್ರಕ್ರಿಯೆಗೆ ವಿವೇಕವಾಗಲೀ ಶ್ರದ್ಧೆಯಾಗಲೀ ತೊಂದರೆಯೇ ಸರಿ. ಧರ್ಮವು ಇದಕ್ಕೆ ಅಡ್ಡಿ, ಆತಂಕವೇ.
ಯಾವಾಗ ಧರ್ಮವು ವಿವೇಕ ಎಂಬ ಅಗ್ನಿಯಲ್ಲಿ ಮಿಳನವಾಗುತ್ತದೋ ಆಗ ಸ್ವಾತಂತ್ಯ್ರ ಮತ್ತು ಶಕ್ತಿಯ ಜನನವಾಗುತ್ತದೆ.
ಧರ್ಮವು ಆಗ ಬಳಶಾಲಿಯಾಗಿರುತ್ತದೆ. ಆಗ ವಿಚಾರದಿಂದ ಶಕ್ತಿ ಇದೆ.
ಧರ್ಮವು ಬೆಳಕು. ಪ್ರಜ್ಞೆಯ ಪ್ರಕಾಶ.
ಧರ್ಮವು ಮುಕ್ತಿ ಕೂಡಾ. ಯಾಕೆಂದರೆ ವಿವೇಕವೇ ಮುಕ್ತ.
Posted by shree_acharya at 04:02 0 comments
Friday, 5 June 2009
ಧರ್ಮ
ದುರ್ಬಲನು ಆತ್ಮ ಹಿಂಸಕನು;
ಸಬಲನು ಪರಹಿಂಸಕನು;
ಧಾರ್ಮಿಕನು ಅಹಿಂಸಕನು;
ಆತ್ಮ ಎಂಬುದೊಂದು ಸಿದ್ಧಾಂತವಲ್ಲ;
ಆತ್ಮ ಎಂಬುದೊಂದು ಅನುಭವ; ಅನುಭೂತಿ; ಒಂದು ಚೇತನ; ಚೈತನ್ಯ.
ಧರ್ಮವು ಸಂಪ್ರದಾಯಗಳಲ್ಲಿ ಇಲ್ಲ. ಸಂಪ್ರದಾಯಗಳು ಬರಿಯ ಸಂಘಟನೆಗಳು ಮಾತ್ರ.
ಧರ್ಮವು ಜೀವಂತ. ಚೈತನ್ಯದ ಚಲನಶೀಲತೆ ಧರ್ಮದಲ್ಲಿ ಇದೆ.
ಶಾಸ್ತ್ರಗಳ ಸಹಾಯ ಸಹಾರ ಇಲ್ಲದೆಯೂ ಧರ್ಮವು ಹಿಡಿದು ನಿಲ್ಲುತ್ತದೆ. ಹಿಡಿದು ಇಡುತ್ತದೆ.
ಆದುದರಿಂದಲೇ ಧರ್ಮವು ಜೀವಂತ. ಆಗ ಶಾಸ್ತ್ರವು ಮೃತ.
ಉಸಿರು ಉಸಿರಿನಲ್ಲಿ ಧರ್ಮ ಇದೆ. ಅದನ್ನು ಕಾಣುವ ದೃಷ್ಟಿ ನಮ್ಮಲ್ಲಿಲ್ಲ. ಧರ್ಮವು ರಕ್ತದ ಕಣಕಣದಲ್ಲಿ ಇದೆ. ಅದನ್ನು ಕಾಣುವ ಸಂಕಲ್ಪವು ಇಲ್ಲ. ಸಾಹಸವೂ ಇಲ್ಲ. ಧರ್ಮ ಸೂರ್ಯನಂತೆ ಸ್ಪಷ್ಟ. ಕಣ್ತೆರೆದು ನೋಡುವವರು ಯಾರು?
ಧರ್ಮವು ಜೀವನ. ಶರೀರದ ಸ್ಮಶಾನದಲ್ಲಿ ಅದನ್ನು ಕಾಣುವುದು ಎಂತು?
ನಿಷ್ಪಕ್ಷನಾಗದ ವಿನಃ ಧಾರ್ಮಿಕನಾಗುವುದು ಅಸಾಧ್ಯ. ಧರ್ಮವೆಂದರೆ ಅಪೇಕ್ಷೆ ಇಲ್ಲದಿರುವುದು, ನಿರ್ದೋಷಿಯಾಗಿರುವುದು.
Posted by shree_acharya at 06:57 0 comments
Thursday, 4 June 2009
ನಾವು - ನಮ್ಮ ಅರಿವು
ನಮಗಾವುದರ ಅರಿವು ಚೆನ್ನಾಗಿಲ್ಲವೋ ಅವುಗಳಿಂದ ನಾವು ಸದಾ ಬಂಧಿತರೇ;
ನಮಗಾವುದರ ಅರಿವು ಚೆನ್ನಾಗಿರುವುದೋ ಅವುಗಳಿಂದ ನಾವು ಸದಾ ಮುಕ್ತರೇ....
ಯಾವುದೇ ಕಾರಾಗೃಹದೊಳಗೆ ನಾವು ಬಂಧಿತರಾದರೂ ನಮಗೆ ಅಶಾಂತಿಯೇ. ವಿರಾಟದೊಂದಿಗೆ ಏಕೀಭಾವಕ್ಕೆ ಒಳಗಾದಾಗ ಅಲ್ಲಿ ಶಾಂತಿ ಬಿಟ್ಟು ಮತ್ತಿನ್ನೇನೂ ಇರಲಾರದು.
Posted by shree_acharya at 03:10 0 comments
Wednesday, 3 June 2009
ನಾನು - ಭ್ರಮೆ
ನಾನು ನನ್ನದು ವಿಸ್ತಾರವಾದಂತೆ ನನ್ನ ದುಃಖವೂ ವಿಸ್ತಾರವಾಗುವುದು.
ನಾನು ದೊಡ್ಡದಾದಷ್ಟೂ ನನ್ನ ಗಾಯವೂ ದೊಡ್ಡದು. ಅದಕ್ಕೆ ಬೀಳುವ ಚಿಕ್ಕ ಪೆಟ್ಟು ಕೂಡಾ ಬಹಳಷ್ಟು ದೊಡ್ಡದು.
ಸುಖವನ್ನು ವೃದ್ಧಿಸಿಕೊಂಡಷ್ಟೇ ನಾವೇ ದುಃಖವನ್ನು ವೃದ್ಧಿಸಿಕೊಂಡಿರುತ್ತೇವೆ.
ಎಲ್ಲಿಯಾದರೂ ನನ್ನದು ಎಂದು ಹೇಳಲು ಯಾವುದೇ ಉಪಾಯವೂ ಇಲ್ಲವಾದರೆ,
ವ್ಯರ್ಥವಾಗಿ ಸುಳ್ಳನ್ನೇ ನನ್ನದು ಎನ್ನುತ್ತಾ ಇರುತ್ತೆವೆಯಲ್ಲಾ, ಯಾಕೆ?
ನನ್ನೊಳಗಿರುವ ಉಸಿರು ನನ್ನದೇನು? ಆಗಷ್ಟೆ ಅದು ಪಕ್ಕದವರ ಉಸಿರಾಗಿತ್ತು. ಇನ್ನೊಂದು ಘಳಿಗೆಯಲ್ಲಿ ಇನ್ನಾರದೋ ಉಸಿರಾಗಬಹುದು.
ಬದುಕು ಯಾರ ದಾವೆಯನ್ನು ತಾನೆ ಸ್ವೀಕರಿಸುತ್ತದೆ? ಹರಿದು ಸಾಗಿ ಬಿಡುವುದೇ ಅದರ ಧರ್ಮ.
ಎಷ್ಟೊಂದು ಆಳವಪ್ಪ ನಮ್ಮ ಭ್ರಮೆ.
Posted by shree_acharya at 01:48 0 comments
Tuesday, 26 May 2009
ಸಾಕ್ಷಿಯಪಥದಲ್ಲಿ....
ಸಾಕ್ಷಿಯಾಗಿರುವುದು, ಸಾಕ್ಷಿಯನ್ನು ಕಂಡುಕೊಳ್ಳುವುದು ಅಧ್ಯಾತ್ಮವೇ ಹೊರತು ದೇವರನ್ನು ಅನ್ವೇಷಿಸುವುದು ಅಧ್ಯಾತ್ಮವಲ್ಲ.
ಪ್ರಾಚೀನರು ಈಶ್ವರಾನ್ವೇಷಣೆಗೆ ಹೊರಟದ್ದಿಲ್ಲ. ಸಾಕ್ಷಿಯಾಗಿರುವುದನ್ನು ಕಂಡುಕೊಳ್ಳಲು ಯತ್ನಿಸಿದ್ದಾರೆ. ಯೋಗನಾದರೂ ಅಷ್ಟೇ. ಆಗ ಮಾತ್ರವೇ ಯೋಗವಾದವು ಅಧ್ಯಾತ್ಮ ಎನಿಸೀತು. ಈಶ್ವರನನ್ನಾದರೂ ನಿರಾಕರಿಸಲಾದೀತು. ನಿರೀಶ್ವರರು ನಿರಾಕರಿಸಿದ್ದಾರೆ. ಆದರೆ ಸಾಕ್ಷಿಯನ್ನಾರಿಗೂ ನಿರಾಕರಿಸಲಾಗಲಿಲ್ಲ. ಬುದ್ಧನಿಗೂ ಆಗಿಲ್ಲ. ಮಹಾವೀರನಿಗೂ ಆಗಿಲ್ಲ. ಚಾರುವಾಕನಿಗೂ ಆಗಿಲ್ಲ. ಸಾಕ್ಷಿಯನ್ನು ಎಂತು ನಿರಾಕರಿಸುವುದು.
Posted by shree_acharya at 08:11 0 comments
Wednesday, 13 May 2009
Towards Comment by Saadhana
ಭಾರತೀಯ ಪರಂಪರೆಯಲ್ಲಿ ವಿದ್ಯೆಗಳದ್ದೇ ದೊಡ್ಡ ಕೋಶವಿದೆ. ಒಂದೊಂದು ವಿದ್ಯೆಯೂ ಗಹನವಾದ ನಿಘಂಟಿನಂತಿದೆ. ಪರಂಪರೆಯಲ್ಲಿ ಬರುವ ವಿದ್ಯೆಗಳೆಲ್ಲಾ ಅಕ್ಷರ ಜೋಡನೆಗಳಿಂದ ಮಂತ್ರವತ್ ರೂಪದಲ್ಲೇ ಇರುತ್ತವೆ. ಕವನದಲ್ಲಿ ಬಂದ ಮಧುವಿದ್ಯೆ ಅಂತವುಗಳಲ್ಲಿ ಒಂದು. ಇಲ್ಲಿ ಆತ್ಮಭಾವವನ್ನು ಜಾಗೃತಗೊಳಿಸುವ ಸಾಧನವಿದೆ. ದೃಷ್ಟಾರರು ಜೀವಿಗಗೊಳಗೆ ಹೃದಯ ಹೃದಯಗಳ ನಡುವಿನ ಸ್ನೇಹಭಾವವನ್ನು ದರ್ಶಿಸಿಕೊಂಡು ಸಾಕ್ಷೀಭಾವವನ್ನು ಸಾಧಕಗೊಲಿಸುವ ಸಿದ್ಧಿಯತ್ತ ಸಾಧಕನನ್ನು ಒಯ್ಯುವ ಯತ್ನವನ್ನು ಮಾಡುತ್ತಾರೆ. ಮಧು ಸ್ನೇಹದ ಸಂಕೇತ. ಇಲ್ಲಿ ಸ್ನೇಹ ಏಕೀಭಾವದಲ್ಲಿ ಆತ್ಮಭಾವದಲ್ಲಿ ಹೃದಯಕ್ಕೆ ಸ್ಥಾನವನ್ನು ಈಯುತ್ತದೆ. ತಲೆಗೆ ಬುದ್ಧಿಗೆ ಸ್ಥಾನ ಅಮುಖ್ಯವೆನಿಸುತ್ತದೆ. ಇದು ಭಾರತೀಯ ವಿದ್ಯೆಯ ಒಂದು ಸೊಗಸು.
Posted by shree_acharya at 08:46 0 comments
ಈ ಮಧುವಿದ್ಯೆ
ಎಲ್ಲೆಲ್ಲೂ ಎಲ್ಲರೂ ಇದ್ದಾರೆ
ಇನ್ನೆಲ್ಲೆಲ್ಲೋ
ಯಾರೊಬ್ಬರೂ ಯಾರೊಂದಿಗೂ
ಮಿಲನ ಆಗುತ್ತಿಲ್ಲ
ಯಾರು ಯಾರ ಮನೆಗೆ ಹೋದರೂ
ಅಲ್ಲಾರೂ ಇರುವುದಿಲ್ಲ
ಯಾರು ಯಾರೊಬ್ಬರ ಕೈಯನ್ನೇ ಹಿಡಿದರೂ
ಅವರಿವರಾರೂ ಅಲ್ಲಿ ಇರುವುದಿಲ್ಲ
ಯಾರೋ ಯಾರದೋ ಹೃದಯಸ್ಪರ್ಶಿಸಿದರೂ ಯಾರೂ
ಯಾರದೋ ತಲೆಯ ಮೇಲೆಯೇ ಕೈ ಇಟ್ಟಂತಾಗುವುದು
ಹೃದಯದಲ್ಲಾರನ್ನೂ ಕಾಣಲಾಗದೆ
ಎಲ್ಲರೂ ಎಲ್ಲರಿಗೂ ತಲೆಯಲ್ಲೇ ಎದುರಾಗುವರು
ಆಗ ಎಲ್ಲರೂ ಇನ್ನೇನನ್ನೋ ಇನ್ನೆಲ್ಲೆಲ್ಲೋ
ಅರಸರಸುತ್ತಾ ಹೋಗುತ್ತಲೇ ಇರುತ್ತಾರೆ
ಯಾರೊಬ್ಬರಿಗೂ ಮಿಲನದ ಸುಖವಿಲ್ಲ
ಅಯ್ಯೋ ಮಿಲನವಾಗಲು ಆಗುತ್ತಿಲ್ಲೆನೇನೋ ಕಾರಣಗಳಿಗಾಗಿ ಹುಡುಕುತ್ತಾರೆ
ನೋಡುತ್ತಾರೆ ದುಃಖದ ಮಡುವುಗಳನ್ನೇ
ಸುಖದ ಆಸೆಗಳು ಬಂಧಿಸುತ್ತಲೇ ಇರುತ್ತವೆ
ಆಸೆಗಳೆಲ್ಲಾ ಮುರಿದು ಬೀಳುತ್ತಲೇ ಇರುತ್ತವೆ
ಪರರಿಂದೇನು ಸಿಕ್ಕೀತು ದುಃಖವೊಂದನ್ನು ಬಿಟ್ಟು
ಸಿಗಲಾರದು ಸುಖವೂ
ಆಗಬೇಕಾದವರು ನೀವು ಪರರಲ್ಲ
ಪರರು ಆಗಬೇಕಾದಲ್ಲಿ ನೀವಲ್ಲ ಆಗಬೇಕಾದವರು
ನೀವಾಗಿ ನೀವಾಗಿ ನೀವಾಗಿ
ನೀವಾಗಿ ಪರರು
ಇದೇ ಈ ಮಧುವಿದ್ಯೆ ಮಣ್ಣಿನ ವಿದ್ಯೆ.....
Posted by shree_acharya at 05:51 1 comments
Sunday, 10 May 2009
ಪರಮಾತ್ಮ
ನಮ್ಮನ್ನು ನಾವು ಕರೆಯಬೇಕೇ? ಕೂಗಬೇಕೇ? ಇನ್ನೊಬ್ಬನನ್ನು ಬೇಕಾದರೆ ಕೂಗಿ ಕರೆಯಬೇಕು.
ನಾವು ಏನನ್ನು ಹುಡುಕುತ್ತಿದ್ದೆವೋ ಅದರಲ್ಲೇ ನಾವು ಇದ್ದೇವೆ. ನಮಗೆಕೋ ಗೊತ್ತಾಗುತ್ತಿಲ್ಲ.
ನಮ್ಮ ಆಂತರ್ಯದೊಳಗೆ ಮೌನ ಉಂಟಾದರೂ ಸಾಕು. ಅದು ಸಹ ಕೇಳಿಸುವಷ್ಟು ಸನಿಹದಲ್ಲಿಯೇ ಇದ್ದಾನೆ ಪರಮಾತ್ಮ.
ಯಾವುದು ಸನಿಹದಲ್ಲಿರುವುದೋ ಅದೇ ಕಳೆದು ಹೋಗುವುದು. ಮೀನಿಗೆಂತು ಸಾಗರವನ್ನು ತಿಳಿದುಕೊಳ್ಳಲಾಗುವುದು?
ಸಾಗರಕ್ಕೆ ತೀರವಿದೆ, ನದಿಗೆ ತೀರವಿದೆ, ವಸ್ತು ವಿಷಯಗಳಿಗೆ ತೀರವಿದೆ. ಪರಮಾತ್ಮನಿಗೆ ಅಂತದ್ದೇನು ಬೇರೇನಾದರೂ ಇದೆಯೇ? ಇದೆ ಅಲ್ಲವೇ ಪರಮಾತ್ಮನ ಅರ್ಥ.
ಇದೇ ಪರಮಾತ್ಮನ ವೈಜ್ಞಾನಿಕ ಪರಿಭಾಷೆಯೇನು?
ಎನಿರುವುದೋ ಅದಕ್ಕೆ ತೀರವಿಲ್ಲ. ಏನಿಲ್ಲವೋ ಅವೆಲ್ಲಕ್ಕೂ ತೀರವಿದೆ.
ಸತ್ಯದಿಂದ ದೂರವಾಗುವುದಾದರೂ ಏಕೆಂದರೆ ಸತ್ಯದಿಂದಲೇ ನಾವು ಹುಟ್ಟಿರುವುದರಿಂದ.
ಕಳೆಯಲಾಗದ, ಕಳೆದುಹೋಗದ, ಕಳೆದುಕೊಳ್ಳಲಾಗದ, ಕಳೆದುಹೋದಂತನಿಸುವ, ಕಳೆದೇಹೋದರೂ ಕಳೆದುಹೋಗದಂತಿರುವ, ಕಳೆದುಕೊಳ್ಳಲೆತ್ನಿಸಿದರೂ ಕಳೆದುಹೋಗದ, ಕಳೆದುಹೋದಂತೆ ಕಂಡರೂ ಕಳೆದೂ ಉಳಿದೇ ಬಿಡುವ, ಕಳೆಯಲಾಗದ, ಕಳೆದುಕೊಂಡಿರುವ ಬದುಕಿನ ಕಳೆಯಲ್ಲಿ ಕಳೆದು ಕಳೆದಷ್ಟೂ ಕಳೆದುಹೋಗದ ಎಲ್ಲವೂ ಕೊಳೆಯಾದರೂ ಕೊನೆಗೂ ಕಳೆಯಾಗಿ ಉಳಿಯದ, ಆದರೂ ಕಳೆದೇಕೊಂಡವರಂತೆ ಸದಾ ಹುಡುಕಾಡುವ, ಎಳೆ ಎಳೆಯಾಗಿಯೂ ಕಳೆಯದ, ಕಳೆಯಲಾಗದ ಆ ವಸ್ತು ಪರಮಾತ್ಮ.
Posted by shree_acharya at 05:48 0 comments
Wednesday, 6 May 2009
ಸಾಕ್ಷೀಭಾವ; ಕತ್ತಲು-ಪ್ರಕಾಶ
ಸಂಸಾರ-ಮೋಕ್ಷ, ಮಿಥ್ಯ-ಸತ್ಯ ಈ ಪದದ್ವಯಗಳೇನು? ಕತ್ತಲು-ಪ್ರಕಾಶ ದ್ವಂದ್ವಗಳಂತೆ ಕಾಣುತ್ತವೆ. ಪರಸ್ಪರ ವಿರೋಧ ಶಬ್ದಗಳಂತೆ ಕಾಣುತ್ತವೆ. ಒಂದು ಮತ್ತೊಂದರ ಶತ್ರುವೇನೋ ಅನಿಸುತ್ತದೆ. ಪ್ರಕಾಶ ಬಂದಾಗ ಕತ್ತಲು ಹೋಯಿತು ಎನ್ನುತ್ತೇವೆ. ಬೆಳಕು ಬಂತು ಅಂಧಕಾರ ಹೋಯಿತು ಎಂಬ ಪರಿಭಾಷೆ ಬಳಕೆಯಲ್ಲಿ ಇದೆ. ಬೆಳಕು ಬಂದದ್ದಾದರೂ ಎಲ್ಲಿಂದ? ಕತ್ತಲು ಹೋದದ್ದೇ ಆದರೂ ಎಲ್ಲಿಗೆ? ವಾಸ್ತವದಲ್ಲಿ ಬೆಳಕು ಬಂದಾಗ ಕತ್ತಲು ಬೆಳಕಿನೊಂದಿಗೆ ಲೀನವಾಯಿತು. ಬೆಳಕು ಅಂಧಕಾರವನ್ನು ತನ್ನೊಳಗೆ ಸೇರಿಸಿಕೊಂಡಿದೆಯಷ್ಟೇ. ಬೆಳಕು ಮರೆಯಾದರೆ ಅಂಧಕಾರ ಇದ್ದಲ್ಲೇ ಉಳಿದಿರುವುದು.
ಮಿಥ್ಯ-ಸತ್ಯ ಇವೆರಡರ ಬಗೆಗೂ ಇದೇ ಪರಿಭಾಷೆ ಪರಿಕಲ್ಪನೆ ಸಾಧುವೆನಿಸುವಂಥಾದ್ದು. ಸಂಸಾರ-ಮೋಕ್ಷ ಎಂದಾಗಲೂ ಇದೇ ಅನ್ವಯಿಕವಾಗಿರುವುದು ಭಾಸವಾಗುವುದು. ಮೋಕ್ಷವಾದಾಗ ಸಂಸಾರ ಇಲ್ಲವಾಯಿತೇ ? ಸಂಸಾರವಿದ್ದಂತೆಯೇ ಮೋಕ್ಷವೂ ಸಾಧ್ಯ. ಮೋಕ್ಷವಾದಾಗ ಸಂಸಾರದ ಭಾಸವಾಗದಿರುವುದಷ್ಟೇ ಪರಿಕಲ್ಪನೆಯ ಪರಿಪಕ್ವತೆಯನ್ನು ಅರ್ಥೈಸಿಕೊಡುವುದು. ಈ ಹಿನ್ನೆಲೆಯಲ್ಲಿ ಜೀವನ್ಮುಕ್ತತೆಗೆ ಹೆಚ್ಚು ಸ್ಪುಟವಾದ ಅರ್ಥವ್ಯಾಪ್ತಿಯಾಗುವುದು ಶರೀರ ಮನಸ್ಸು ಆತ್ಮಗಳ ವಿಭಾಗೀಕರಣದಲ್ಲಿ ಆತ್ಮವು ಸ್ಥಾಯಿಯಾಗಿ ಅವಿನಾಶಿಯಾಗಿ ಇರುತ್ತದೆ. ಮನಸ್ಸು ಶರೀರಾದಿ ವಿಷಯಗಳು ಸಂಚಾರಿ ಭಾವದಲ್ಲಿ ನಾಶಗಾಮಿಯಾಗಿ ಇರುತ್ತವೆ. ಇವುಗಳನ್ನೇ ಆತ್ಯಂತಿಕವಾಗಿ ಅಸ್ತಿತ್ವದಲ್ಲಿ ಕಂಡುಕೊಳ್ಳುತ್ತಾ ಇವುಗಳನ್ನೆಲ್ಲಾ ಆತ್ಮದಂತಹ ದರ್ಪಣದಲ್ಲಿ ಲೇಪಿಸಿಕೊಂಡು ಆತ್ಮಭಾವವನ್ನೇ ಕಳೆದುಕೊಳ್ಳುವುದು ಅಂಧಕಾರಕ್ಕೆ ಕಾರಣವಾಗುವುದು. ಅಜ್ಞಾನಕ್ಕೆ ಪರಮೋಚ್ಛ ಸ್ಥಾನವನ್ನು ಕಲ್ಪಿಸಿಕೊಳ್ಳುವುದು ನಾಶಕಾರಿ ಎನಿಸುವುದು. ನಾಶವಿಲ್ಲದ ಸಾಕ್ಷೀಭಾವವನ್ನು ಉಳಿಸಿಕೊಳ್ಳುವುದೆಂದರೆ ಮನಸ್ಸು ಶರೀರಾದಿಗಳು ಇದ್ದಂತೆಯೇ ಆತ್ಮದ ದರ್ಪಣದಲ್ಲಿ ಅವುಗಳನ್ನು ಅಂಟಿಸಿಕೊಳ್ಳದೆ ದರ್ಪಣದ ಪ್ರತಿಪಲನ ಗುಣವನ್ನು ಶುದ್ಧ ಹಾಗೂ ಸ್ಪುಟವಾಗಿ ಇರಿಸಿಕೊಳ್ಳುವುದೇ ಸಾಕ್ಷೀಭಾವ. ನಾಶಗುಣದ ವಸ್ತುವಿನ ಆಘಾತವು ಅವಿನಾಶಿ ವಸ್ತುವಿನ ಮೇಲೆ ಆಗದಂತೆ ಇರುವ ಸಾತಥ್ಯ ಗುಣದ ಆಕಾಶಿ ಭಾವವೇ ಸಾಕ್ಷೀಭಾವ.
Posted by shree_acharya at 02:56 0 comments
ಮನಸ್ಸು ಮತ್ತು ಸಾಂಖ್ಯ
ಮನಸ್ಸನ್ನು ಶರೀರದಿಂದ ಪ್ರತ್ಯೇಕಿಸಿದರೆ ಆಗ ಅದು ಯೋಗ. ಮನಸ್ಸನ್ನು ಆತ್ಮದಿಂದ ಪ್ರತ್ಯೇಕಿಸಿದರೆ ಆಗ ಅದು ಸಾಂಖ್ಯ.
Posted by shree_acharya at 02:55 0 comments
ಆತ್ಮ ಮತ್ತು ಮನಸ್ಸು
ಆತ್ಮವು ಆಂತರ್ಯದ ಒಳಗಿನೊಂದು ದರ್ಪಣದಂತೆ. ಇದು ಸ್ವಚ್ಚ ಶುದ್ಧವಾಗಿದ್ದಲ್ಲಿ ಮನಸ್ಸಿನ ಯಾವ ಚಿತ್ರಗಳ ಪ್ರತಿಬಿಂಬಗಳು ದರ್ಪಣದಲ್ಲಿ ಮೂಡಿದರೂ ದರ್ಪಣಕ್ಕೆ ಅಂಟಿಕೊಳ್ಳಲಾಗದು . ಅಂಟಿಕೊಳ್ಳದೆ ಇದ್ದಾಗ ಒಳಗೆ ಯಾವ ಗಂಟೂ ಸಿಕ್ಕೂ ಇರಲಾರದು.
ಮನಸ್ಸಿನ ವಾಸನೆಗಳೊಂದಿಗೆ ಆತ್ಮವೋ ಬ್ರಹ್ಮವೋ ಬಂಧಿಯಾಗಿದ್ದಾಗ ಮಾತ್ರವೇ ಸಂಸಾರ. ಮನಸ್ಸಿನ ವಾಸನೆಗಳಿಂದ ಮುಕ್ತರಾದಾಗ ಸಂಸಾರದಿಂದ ಮುಕ್ತರು. ಸಂಸಾರದಲ್ಲಿಯೇ ನಾವಿದ್ದರೂ ಜೀವನ್ಮುಕ್ತರಂತೆ ಇರಬಹುದು.
Posted by shree_acharya at 01:49 0 comments
Friday, 1 May 2009
ಕೈವಲ್ಯ
ಚೇತನ ಮಾತ್ರವನ್ನೇ ಅನುಭವಿಸುವ ಒಂದು ಕೇವಲ ಸ್ಥಿತಿಯೇ ಕೈವಲ್ಯ. ಚೇತನ ಬಿಟ್ಟು ಯಾವ ವಿಚಾರವೂ ಇಲ್ಲದ ಅನುಭವವೇ ಕೈವಲ್ಯ. ಇದು ಚೈತನ್ಯ ಮಾತ್ರದ ಕಥಾನುಭವ. ಎಚ್ಚರ ಮಾತ್ರದ ಕಥಾನುಭವ. ಇದೊಂದು ಸಾಕ್ಷೀ ಸ್ಥಿತಿ ಅಥವಾ ಭಾವ. ಇಲ್ಲೊಂದು ಏಕೀಭಾವ ಅಥವಾ ಏಕಾಂಗಿ ಸ್ಥಿತಿ ಇರುವುದು. ಎಲ್ಲವನ್ನು ಕಾಣುವಂತೆ ಇದ್ದರೂ ಕಂಡದ್ದೆಲ್ಲಾ ಕನಸಷ್ಟೇ. ಕನಸಿನಂತಷ್ಟೇ. ಇಲ್ಲಿ ನಾನೆ ಇರುವುದು. ಮತ್ತೆ ಇನ್ನೇನೂ ಇಲ್ಲ. ಅಗಾಧ ಚೈತನ್ಯ ಸಾಗರದಲ್ಲಿ ಅರಗಿ ಲೀನವಾಗಿರುವ ಸ್ಥಿತಿ ಏನೇನೂ ಇಲ್ಲ. ಎಚ್ಚರದ ಸ್ಥಿತಿ.
ಜಗತ್ತಿನ ಎಲ್ಲ ವ್ಯಾಪಾರಗಳೂ ಇರುವುದು ಆಟಮಾತ್ರ. ಸಾಕ್ಷೀ ಒಂದು ಚೇತನ ಮಾತ್ರವೇ ಕೇವಲ ಸತ್ಯ. ದೃಷ್ಟ ಮಾತ್ರನೇ ಸತ್ಯ. ಇದೊಂದು ಜಾಗೃತ ಸ್ಥಿತಿ. ರಾತ್ರಿ ಗಾಢ ನಿದ್ರೆ. ಅನಂತದ ಜತೆ ಲೀನವಾಗುವ ಸ್ಥಿತಿ. ಚೇತನಗಳೆಲ್ಲಾ ಜಾಗೃತವಾದ ಸ್ಥಿತಿ. ಯಾರೋ ಕಳ್ಳ ಕಿಟಕಿ ಮುರಿಯುವ ಸಿದ್ಧತೆಯಲ್ಲಿ ಇದ್ದಾನೆ. ಈ ಜಾಗೃತ ಸ್ಥಿತಿ ಇದನ್ನು ನೋಡುತ್ತದೆ. ನಿದ್ರೆಯಿಂದ ಎಚ್ಚರವಾಗುತ್ತದೆ. ಎದ್ದು ದೀಪ ಬೆಳಗಿಸುತ್ತಲೇ ಕಳ್ಳ ಓಟಕಿತ್ತಿರುತ್ತಾನೆ. ಹೊರಗೆ ನಿದ್ರೆಯಿಂದ ಎಚ್ಚರವಾದಾಗಲೂ ನಮಗೆ ಈ ಸುದ್ದಿ ಮಾತ್ರ ಇಲ್ಲ. ಆದರೆ ನಮ್ಮ ಈ ಚೈತನ್ಯದ ಸ್ಥಿತಿ ಇದನ್ನು ಕೇವಲವಾಗಿ ಕಂಡಿದೆ. ತತ್ಸಂಬಂಧಿ ಕ್ರಿಯೆಗಳಲ್ಲಿ ತೊಡಗಿಸಿಕೊಂಡಿದೆ. ಈ ಆಂತರಿಕ ಎಚ್ಚರದ ಸ್ಥಿತಿಯನ್ನೇ ಸಾಕ್ಷೀಭಾವ ಎನ್ನುವುದು. ರಾತ್ರಿ ಮೂರು ಗಂಟೆಗೆ ಎದ್ದು ನಾಲ್ಕು ಗಂಟೆಯ ರೈಲನ್ನು ಹಿಡಿಯಲಿಕ್ಕಿದೆ. ಗಡಿಯಾರದ ಮುಳ್ಳು ಮೂರರಲ್ಲಿ ನಿಂತದ್ದೇ ಸರಿ, ತಕ್ಷಣ ಗಾಢ ನಿದ್ರೆಯಿಂದ ಎಚ್ಚರವಾಗುವುದು. ಇದು ನಮ್ಮೊಳಗಿರುವ ಸಾಕ್ಷೀಭಾವದ ಸೂಚನೆ. ಈ ಸಂಜ್ಞೆಯೇ ಎಚ್ಚರ. ಕೆಲವರಲ್ಲಿ ಇದು ಮಸುಕು ಮಸುಕಾಗಿರಬಹುದು. ಅಥವಾ ಅನುಭವಕ್ಕೆ ಬಾರದಿರಬಹುದು. ಇನ್ನು ಕೆಲವರಿಗೆ ಈ ಅನುಭವ ಅತ್ಯಂತ ತೀವ್ರತರವಾಗಿರಬಹುದು. ಸದಾ ಜಾಗೃತವಾಗಿರಬಹುದು. ಇದೇ ನಿಜವಾದ ಜಾಗೃತ ಅವಸ್ಥೆ. ಇದನ್ನೇ ಎಚ್ಚರ, ಜಾಗೃತಿ ಎನ್ನುವರು. ಇಂತಹ ಎಚ್ಚರದಲ್ಲಿಯೇ ಕಾಯುವಂತಿರಬೇಕು. ಈ ರೀತಿ ಎಚ್ಚರದಲ್ಲಿ ಜೀವಿಸುವವರು ಒಂದು ದಿನ ಎಚ್ಚರದಲ್ಲಿಯೇ ಸಾಯುವವರು ಕೂಡ. ಇಂತಹ ಎಚ್ಚರದಿಂದ ಸಾಯುವವರಿಗೆ ಬ್ರಹ್ಮರೂಪನದನೆಂಬ ಅನುಭವವಾಗುವುದು. ಇದು ಸಾಕ್ಷೀಭಾವ. ಶರೀರದಲ್ಲಿರುವ ಸುಪ್ತವಾಗಿರುವ ಚೇತನದೊಂದಿಗೆ ಇದರ ಅನುಭವವನ್ನು ಹೊಂದಬಹುದಾಗಿದೆ. ತದನಂತರ ಶರೀರಯಾಮದಿಂದ ಹೊರತಾಗಿಯೂ ಅನುಭವವನ್ನು ಪಡೆಯಬಹುದಾಗಿದೆ. ಇಂತಾದ ಎಚ್ಚರದ ಸ್ಥಿತಿಯಲ್ಲಿ ಶರೀರದ ಘಟ ಒಡೆದುಕೊಳ್ಳುವ ಘಟನೆಯಲ್ಲೂ ಸಾಕ್ಷೀಭಾವವು ಘಟ ಒಡೆಯುವ ಮೃತ್ಯುವೆಂಬ ಪ್ರಕ್ರಿಯೆಯನ್ನೂ ಅನುಭವಿಸಬಹುದು. ಈ ಎಚ್ಚರವೇ ಅಂತರಾಕಾಶದಲ್ಲಿ ವಿರಾಟಾಕಾಶದಲ್ಲಿ ಲೀನವಾಗುತ್ತದೆ. ಎಚ್ಚರದ ಕೇವಲ ಚೇತನವಾಗಿಯೋ ಆತ್ಮವಾಗಿಯೋ ಉಳಿಯುತ್ತದೆ. ಇಲ್ಲಿಂದ ಮತ್ತೊಂದು ಅದ್ಭುತ ಅಂತರ್ಯಾತ್ರೆ ಮುಂದುವರಿಯುವುದು. ಇಂತಹವರಿಗೆಂತು ಮೃತ್ಯು ಶತ್ರುವಾಗಲು ಸಾಧ್ಯ?
ಈ ಎಚ್ಚರವಂತ ಚೇತನರಿಗೆ ಮೃತ್ಯುವು ಮಿತ್ರನೇ. ಆತ್ಮ ಪರಮಾತ್ಮರ ಮಿಲನವು ಜೀವಂತ. ಜೀವನ ನಡೆಸುತ್ತಿರುವಾಗಲೂ ಎಚ್ಚರದ ಸ್ಥಿತಿಯಲ್ಲಿ ಸುಪ್ತವಾಗಿ ಗುಪ್ತವಾಗಿ ನಡೆಯುತ್ತಿರುತ್ತದೆ. ಇಂತಹ ಮಿಲನದ ಮಂದಿರದೊಳಗೆ ಮಹಾದ್ವಾರದಂತಿದೆ. ಧ್ಯಾನ ಪ್ರಕ್ರಿಯೆ ಇಂತಹ ಗಾಢತಮವಾದಂತೆ ಸಾಕ್ಷೀಭಾವವು ತೀವ್ರತರವಾಗುತ್ತಿರುತ್ತದೆ.
Posted by shree_acharya at 01:17 0 comments
Monday, 27 April 2009
Some of his poems...
(1)
ಸಂತನ ಹಾದಿ
ಲಿಪಿ ಅಂಬಲಪಾಡಿ (ಕಾವ್ಯ ನಾಮ )
ಸಂತನಿವ ಹೆದರುವುದಿಲ್ಲ ನಿಲ್ಲಲು
ತನ್ನ ನಿಲುವಿನಲ್ಲಿ ನೆಲೆಯಲ್ಲಿಯೊಂಟಿ
ದೊಡ್ಡ ಕೊಳ್ಳೆಯಿಲ್ಲ ದೊಡ್ಡ ಯೋಜನೆಯಿಲ್ಲ
ಸೋತರೂ ಆತನಿಗಿಲ್ಲ ಎನಿತು ದುಃಖ
ಗೆಲುವಿನಲ್ಲಿ ತನ್ನ ತಾನೆ ಪ್ರಶಂಸಿಸಿಕೊಳ್ಳುವುದಿಲ್ಲ
ಮೊನಚು ಶಿಕರವೆರಲೂ ಗಲಿಬಿಲಿಯಿಲ್ಲ
ನೀರಲ್ಲೇ ಮುಳುಗಿದರೂ ಒದ್ದೆಯಾಗುವುದಿಲ್ಲ
ಬೆಂಕಿಯಲ್ಲೇ ನಡೆದರೂ ಸುಟ್ಟುಹೋಗುವುದಿಲ್ಲ
ಅವರೋ ಪರಬ್ರಹ್ಮವನೆ ಬದುಕುವವರು
ಪ್ರಾಚೀನರಿವರು ಮನುಜರಾಗಿ ಮೊದಲು ಬಂದರು
ಸಾಂತರಿವರು ನಿದ್ರೆಯಲಿ ಕನಸು ಕಂಡಿಲ್ಲ
ಇವರು ನಿದ್ರೆಯಿಂದ ಎದ್ದಾಗಲೂ ಯಾವ ಚಿಂತೆಯೂ ಇಲ್ಲ
ಇವರ ಆಹಾರವೋ ಸರಳ ಉಸಿರು ಗಾಢ ನಿರಾಳ
ಉಸಿರು ಇವರ ಪಾದದ ಹೆಮ್ಮೆಟ್ಟಿನಿದಲೇ
ಉಳಿದವರದು ಉಸಿರುಕಟ್ಟಿದಂತೆ ಗಂಟಲ ಆಳದಲೇ
ವಿವಾದದಲ್ಲಿ ಇವರ ವಾದವೋ ವಾತಿಮಾಡಿದಂತೆ
ಕರುಣೆಯ ಚಿಲುಮೆಯಲ್ಲಿ ಅವಿತಿರುವುದೋ
ಪ್ರಾಚೀನರಿವರಿಗೆ ಜೀವನ ಕಾಮವೇ ಇಲ್ಲ
ಕಂಡರಿದನು ಸಗ್ಗದ ಕಾರಂಜಿಗಳೂ ಒಣಗುವವು
ಸಂತಸರೆ ದ್ವಾರವೆಂಬಂತೆ ಪ್ರವೆಶಿಸುವರಿವರಿಗೆ
ಮರಣವೆಂಬುದರ ಭೀತಿಯೂ ಇಲ್ಲ
ನಿರಗಮನದಲ್ಲಿಲ್ಲ ನೈರುದ್ಧ್ಯದ ನಿಲುವು
ಬರವೂ ಸರಳ ಸರಳ ತೆರವು
ಎಲ್ಲಿಂದ ಬಂದೆವೋ ಪ್ರಶ್ನೆಯೇ ಅಲ್ಲ ಅವು
ಎಲ್ಲಿಗೆ ಹೋಗುವಿರೆಂದರೋ ಬರಳುತ್ತರವು
ರಥಚಾಲನೆಗೆ ಸಿಂಡರಿಸದ ಮುಖವು
ಜೀವನದುದ್ದವೂ ವಿದಿತ ಹೋರಾಟವು
ಬಂದಂತೆ ಹೇಗಿದ್ದರೂ ಜೀವನ ಸ್ವೀಕಾರ
ಮರಣದಲೂ ಸಂತಸದಲೇ ಅದರ ಅದರ
ಬ್ರಹ್ಮದೊಂದಿಗೆ ಇವರ ಹೋರಾಟವಿಲ್ಲ
ಬ್ರಹ್ಮಪಥಕೆಂದೂ ಇವರು ಅಡ್ಡಿಯಲ್ಲ
ಸ್ವತಂತ್ರ ಮನ ಸಂಡವೇಳಲೋ ಯೋಚನೆಗಳು
ಇಲ್ಲ ಹುಬ್ಬುಗಳಲಿ ಗಂಟುಗಳು
ಮುಖಮುದ್ರೆಯದೂ ತೀವ್ರ ನಂಟು
ಮಳೆಗಾಲದಂತೆ ಇವರ ಸ್ಪರ್ಶ ಶೀತಲ
ಸೆಕೆಗಾಲದಂತಿಲ್ಲ ಇವರ ಹಿಡಿಯ ಕಾಲ
ಇವರಿಂದ ಬರುವುದೆಲ್ಲವೂ ಶಾಂತ
ಚತುಷ್ಕಾಲದ ಪ್ರಶಾಂತ ಅತಿಥಿ ಸಂತ
** ** **
Posted by shree_acharya at 05:25 0 comments
Heal your Life...
Shree Acharyaji has an uncanny insight to go into the problem given to him. He does, it seems , this by way of vast knowledge, experience & wisdom. He has been doing this all through his life in last 30 years. While doing these he appears to draw his solutions to his clients from more than 25 different dciplines
like "SHREEVIDHYA","TANTRA", "YANTRA", "MANTRA", "ASTROLOGY", "NUMEROLOGY", "VAASTHU", "SEMIOTICS", "FENG-SHUI" , "REKHA SHASTHRA", "I-CHING", "GRAPHOLOGY", GRAPHIKOLOGY", "PALMISTRY", "SYMBOLISM" & MANY MORE . He has been very use full to many people placed around India, US , UK , Japan & many other countries. He has served both individual & industries around the world. His guidelines in life have taken many to shape their respective & respect full callings. No problem is in generality prospective and every solution is very very specific to the problem. All remedies holistically and specific to the problem.
Posted by shree_acharya at 05:10 0 comments
ಉಪನಿಷತ್ ಗಳ ಬಗ್ಗೆ ....
ನನ್ನ ಮನೆ; ನನ್ನ ಕಾರು; ನನ್ನ ಊರು; ನನ್ನ ದೇಶ;
ಇವುಗಳಿಗೆಲ್ಲ ನಾನು ಮಾಲಕನಲ್ಲವಲ್ಲ!
ಅದು ನನ್ನದು ಹೇಗಾದೀತು?
ಇವುಗಳ ಬಗೆಗೆ ನನ್ನಲ್ಲಿ ಕೃತಜ್ಞತಾ ಭಾವ ಅನುಗ್ರಹೀತ ಭಾವ
ಇಲ್ಲದೇ ಹೋದಲ್ಲಿ ಅವು ನನ್ನದು ಹೇಗಾದಾವು ?
ಭಾವ ಒಂದಿದ್ದರೆ ಸಾಕು ಅದು ಸಾಕ್ಷಿಯಾಗಿರುತ್ತದೆ.
ಆಗ ನನ್ನ ಮಾಲಕನೂ ನಾನೇ !
ನನ್ನ ಮಾಲಕತ್ವವೂ ನನ್ನದೇ ; ಯಾವುದು ನನ್ನದಲ್ಲ.
ಎಲ್ಲವೂ ನನ್ನದೇ; ಎಲ್ಲವೂ ನಾನೇ; ನಾನು ಇಲ್ಲಿ ಸಾಕ್ಷಿ ಮಾತ್ರ.
ನಾನು ಅನುಗ್ರಹೀತ. ನಾನು ಕೃತಜ್ಞ.
ನನಗೆ ನಾನೇ ಕೃತಜ್ಞ. ಮತ್ತೆಲ್ಲದಕ್ಕೂ.
ಇಡಿ ವಿಶ್ವವೇ ನನ್ನದು. ಈ ವಿಶ್ವಕ್ಕೆ ಶರಣಾಗಿದ್ದೇನೆ. ಸಾಕ್ಷಿಯಾಗಿ.
Subscribe to:
Comments (Atom)